‘ಮುಸ್ಲಿಮರೇ ಬಿಜೆಪಿಗೆ ಟಾರ್ಗೆಟ್’
‘ದೇಶದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಪಕ್ಷಕ್ಕೆ ಮುಸ್ಲಿಮರೇ ಟಾರ್ಗೆಟ್ ಆಗಿದ್ದಾರೆ. ಇದರ ಭಾಗವಾಗಿಯೇ ಮುಸ್ಲಿಮರ ಮೀಸಲಾತಿ ತೆಗೆಯುವ ಹುನ್ನಾರ ನಡೆಸಿದ್ದಾರೆ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ಹಿಜಾಬ್ ಹಲಾಲ್ ಕಟ್ ಮಸೀದಿಗಳ ಆಜಾನ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ–ಧರ್ಮದ ಹೆಸರು ಹೇಳುವುದಾದರೆ ರಾಜಕಾರಣಕ್ಕೆ ಬರಬಾರದು. ಚುನಾವಣೆಯಲ್ಲಿ ಎಲ್ಲರೂ ವೋಟು ಹಾಕಿ ಗೆಲ್ಲಿಸಿರುತ್ತಾರೆ. ಗೆದ್ದ ನಂತರ ಜಾತಿ–ಧರ್ಮ ಅಂತ ಬೇರ್ಪಡಿಸಿ ಮೋಸ ಮಾಡಿದರೆ ನಮ್ಮ ಮಕ್ಕಳು ಹುಳ ಬಿದ್ದು ಸಾಯುತ್ತಾರೆ’ ಎಂದು ಆಕ್ರೋಶ ಭರಿತವಾಗಿ ಹೇಳಿದರು.