ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ: ಅಮಿತ್‌ ಶಾ ಆರೋಪ

ವರುಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಶಕ್ತಿ ಪ್ರದರ್ಶನ | ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
Published : 2 ಮೇ 2023, 13:22 IST
Last Updated : 2 ಮೇ 2023, 13:22 IST
ಫಾಲೋ ಮಾಡಿ
Comments
‌ಮೋದಿ ಕೈಯಲ್ಲಿ ಮಾತ್ರ ರಾಜ್ಯ ಸುರಕ್ಷಿತ
‘ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಮಾತ್ರ ಕರ್ನಾಟಕ ಸುರಕ್ಷಿತವಾಗಿರುತ್ತದೆ. ಬಿಜೆಪಿ ಗೆಲ್ಲಿಸಿದರೆ ರಾಜ್ಯ ಸಮೃದ್ಧವಾಗಲಿದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರನ್ನು ಅಧಿಕಾರಕ್ಕೆ ತಂದರೆ ಪಿಎಫ್‌ಐ ಸಂಘಟನೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಿದ್ದಾರೆ. ಅಂಥವರು ನಿಮಗೆ ಬೇಕಾ’ ಎಂದು ಅಮಿತ್‌ ಶಾ ಪ್ರಶ್ನಿಸಿದರು.
ಅರೇ, ಸಿದ್ದರಾಮಯ್ಯ ಅವರೇ, ಯಡಿಯೂರಪ್ಪ ಕೃಷಿ ಬಜೆಟ್ ಮಂಡಿಸಿದರು. ಬಸವರಾಜ ಬೊಮ್ಮಾಯಿ ಅವರು ಕಿಸಾನ್ ಸಮೃದ್ಧಿ ಯೋಜನೆಯಡಿ 54 ಲಕ್ಷ ರೈತರ ಮಾಹಿತಿ ನೀಡಿದರು. ₹ 15 ಸಾವಿರ ಕೋಟಿ ಹಣವನ್ನು ವಾರ್ಷಿಕ ₹ 10 ಸಾವಿರ ಅನುದಾನದಂತೆ ರೈತರ ಬ್ಯಾಂಕ್‌ ಖಾತೆಗಳಿಗೆ ಹಾಕಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ
‘ಭ್ರಷ್ಟರಾಗದೇ ಅಭಿವೃದ್ಧಿ ಮಾಡಿದ್ದರೆ ಸಿದ್ದರಾಮುಯ್ಯ ಕ್ಷೇತ್ರ ಹುಡುಕಾಟವೇಕೆ ಮಾಡಬೇಕಿತ್ತು. ಎಲ್ಲಿಯೂ ಅಭಿವೃದ್ಧಿ ಮಾಡದ್ದರಿಂದ ಜನರೇ ಅವರನ್ನು ಓಡಿಸುತ್ತಿದ್ದಾರೆ. ವರುಣದಿಂದ ಚಾಮುಂಡೇಶ್ವರಿ, ಬಾದಾಮಿಗೆ ಹೋಗಿ ಮತ್ತೆ ವರುಣಕ್ಕೆ ಓಡಿ ಬಂದಿದ್ದಾರೆ. ಮತದಾರರೇ ನಿವೃತ್ತರಾಗುವ ನಾಯಕ ಬೇಕಾ? ನಿರಂತರ ಕೆಲಸ ಮಾಡುವ ಸೋಮಣ್ಣ ಬೇಕಾ’ ಎಂದು ಪ್ರಶ್ನಿಸಿದರು.
ದೊಡ್ಡವ್ಯಕ್ತಿ ಮಾಡಲಿದ್ದಾರೆ
‘ಮಹತ್ವಪೂರ್ಣ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಶಾಸಕರಾಗಿ ಚುನಾಯಿಸಿದರೆ, ಅವರನ್ನು ಬಿಜೆಪಿಯು ದೊಡ್ಡ ವ್ಯಕ್ತಿಯಾಗಿ ನಿಮ್ಮ ಮುಂದೆ ಬಂದು ನಿಲ್ಲಿಸಲಿದೆ. ಸೋಮಣ್ಣ ಹಾಗೂ ತಿ.ನರಸೀಪುರ ಅಭ್ಯರ್ಥಿ ಡಾ.ರೇವಣ್ಣ ಅವರಿಗೆ ನೀಡುವ ಪ್ರತಿಯೊಂದು ಮತಗಳು ರಾಜ್ಯವನ್ನು ಸುರಕ್ಷಿತವಾಗಿಡಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT