ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ(ಮುದ್ದೇಬಿಹಾಳ), ಬಸವನಗೌಡ ಪಾಟೀಲ ಯತ್ನಾಳ(ವಿಜಯಪುರ), ರಮೇಶ ಭೂಸನೂರ(ಸಿಂದಗಿ), ಸೋಮನಗೌಡ ಪಾಟೀಲ ಸಾಸನೂರ(ದೇವರ ಹಿಪ್ಪರಗಿ) ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಬಸವನ ಬಾಗೇವಾಡಿಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಬಬಲೇಶ್ವರ ಕ್ಷೇತ್ರಕ್ಕೆ ವಿಜುಗೌಡ ಪಾಟೀಲ ಮತ್ತು ಇಂಡಿಗೆ ಕಾಸುಗೌಡ ಬಿರಾದಾರ ಅವರಿಗೆ ಟಿಕೆಟ್ ನೀಡಲಾಗಿದೆ.