‘ಡಿ.ಕೆ.ಶಿವಕುಮಾರ ಈಗಲಾದರೂ ಬುದ್ಧಿ ಕಲಿಯಬೇಕು. ಬದಲಾಗಬೇಕು. ‘ವಿಷಕನ್ಯೆ’ಯಿಂದ ದೂರ ಇರಬೇಕು. ಇಲ್ಲದಿದ್ದರೆ ಅವನೂ ಉದ್ಧಾರವಾಗುವುದಿಲ್ಲ. ನಾಶವಾಗುತ್ತಾನೆ’ ಎಂದೂ ಹೇಳಿದರು.
‘ಈಗಲೂ ನಾನು ಕೇಂದ್ರ ಗೃಹಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ. ರಾಜ್ಯದ ಸಿ.ಡಿ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು. ನಾನು ಹೇಗೋ ಗಟ್ಟಿಯಾಗಿದ್ದೇನೆ. ಆದರೆ, ಇನ್ನೂ ನೂರು ಮಂದಿಯ ಸಿ.ಡಿ.ಗಳು ಡಿಕೆಶಿ ಬಳಿ ಇವೆ. ಇದನ್ನು ಸಿಐಡಿಗೆ ಒಪ್ಪಿಸಿದರೆ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.