ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲಕೃಷ್ಣ ಬೇಳೂರು ಕೈಬೀಡಬೇಡಿ: ನಟ ಶಿವರಾಜ್‌ ಕುಮಾರ್

Published 1 ಮೇ 2023, 15:35 IST
Last Updated 1 ಮೇ 2023, 15:35 IST
ಅಕ್ಷರ ಗಾತ್ರ

ಆನಂದಪುರ: ‘ಈ ಬಾರಿಯ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಕೈಬೀಡಬೇಡಿ’ ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮತಯಾಚನೆ ಮಾಡಿದರು.

ಆನಂದಪುರದಲ್ಲಿ ನಡೆದ ಬೃಹತ್ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕಾದರೆ ಒಳ್ಳೆಯ ಮನಸ್ಸು ಇರಬೇಕು. ಆ ಮನಸ್ಸು ಬೇಳೂರು ಅವರಲ್ಲಿ ಇರುವುದರಿಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಿಸಿಲು ಲೆಕ್ಕಿಸದೆ ಇಲ್ಲಿ ಸೇರಿದ್ದರು. ಇಲ್ಲಿ ಎಲ್ಲ ನಟರ ಅಭಿಮಾನಿಗಳು ಸೇರಿದ್ದೀರಿ. ಸುದೀಪ್, ದರ್ಶನ್ ಎಲ್ಲ ನಟರ ಅಭಿಮಾನಿಗಳು ಇರುತ್ತಾರೆ. ಅವರೆಲ್ಲರಿಗೂ ಸಂತೋಷವಾಗಬೇಕು' ಎಂದರು.

‘ಸಿನಿಮಾ ಅಂತ ಬಂದಾಗ ನಾವೆಲ್ಲರೂ ಒಂದೇ. ನಾನು ಬೇಳೂರು ಅವರ ಪರವಾಗಿ ಮತಯಾಚನೆ ಮಾಡಲು ಬಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಅವರಿಗೆ ಬೇಕು. ನನ್ನನ್ನು ಸ್ವಾಗತಿಸಿದ ಹಾಗೆ ಬೇಳೂರು ಅವರನ್ನು ಸ್ವಾಗತಿಸುತ್ತಿರ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

‘ಬೇಳೂರು ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಮೇ 10ರಂದು ಹಸ್ತ ಗುರುತಿಗೆ ಮತ ಚಲಾವಣೆ ಮಾಡಬೇಕು’ ಎಂದು ಹೇಳಿದರು. ನಂತರ ಅಭಿಮಾನಿಗಳ ಒತ್ತಾಸೆ ಮೇರೆಗೆ ಹಾಡುಗಳನ್ನು ಹೇಳುವ ಮೂಲಕ ರಂಜಿಸಿದರು.

ಯಡೇಹಳ್ಳಿಯಿಂದ ಆನಂದಪುರದ ಬಸ್ ನಿಲ್ದಾಣದವರೆಗೆ ಬೈಕ್ ರ‍್ಯಾಲಿ ನಡೆಯಿತು.

ಸೊರಬ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಧು ಬಂಗಾರಪ್ಪ, ಸಾಗರ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಗೀತಾ ಶೀವರಾಜ್ ಕುಮಾರ್, ಪ್ರಮುಖರಾದ ಅನಿತಾಕುಮಾರಿ, ಮಲ್ಲಿಕಾರ್ಜುನ ಹಕ್ರೆ, ಕಲಗೋಡು ರತ್ನಾಕರ್ ಇದ್ದರು.

ಆನಂದಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ನಟ ಶಿವರಾಜ್ ಕುಮಾರ್ ಮತಯಾಚನೆ ಮಾಡಿದರು.
ಆನಂದಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ನಟ ಶಿವರಾಜ್ ಕುಮಾರ್ ಮತಯಾಚನೆ ಮಾಡಿದರು.
ಆನಂದಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ನಟ ಶಿವರಾಜ್ ಕುಮಾರ್ ಮತಯಾಚನೆ ಮಾಡಿದರು.
ಆನಂದಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ನಟ ಶಿವರಾಜ್ ಕುಮಾರ್ ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT