ಮೊದಲ ಅಥವಾ ಎರಡನೇ ಪಟ್ಟಿಯಲ್ಲಿ ತಮಗೆ ಟಿಕೆಟ್ ಘೋಷಣೆ ಆಗಬಹುದೆಂದು ಉಮಾಶ್ರೀ ಭಾವಿಸಿದ್ದರು. ಆದರೆ, ಹೆಸರು ಘೋಷಣೆಯಾಗದ ಕಾರಣ ಆತಂಕಗೊಂಡಿರುವ ಅವರು, ಮುಂದಿನ ಪಟ್ಟಿಯಲ್ಲಾದರೂ ತಮ್ಮ ಹೆಸರು ಘೋಷಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ತೇರದಾಳ ಕ್ಷೇತ್ರದಿಂದ ಉಮಾಶ್ರೀ ಮೂರು ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ
ದ್ದಾರೆ. 2013ರಲ್ಲಿ ಬಿಜೆಪಿಯ ಸಿದ್ದು ಸವದಿ ವಿರುದ್ಧ ಗೆದ್ದಿದ್ದರು. 2008 ಮತ್ತು 2018ರಲ್ಲಿ ಸೋತಿದ್ದರು.