ನಾಲ್ಕು ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಚನ್ನಬಸಪ್ಪ, ಹಾಲಿ ಪಾಲಿಕೆ ಆಡಳಿತ ಪಕ್ಷದ ನಾಯಕ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದ ಅವರು, ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ಹಿಂದುತ್ವದ ಆಶಯಗಳ ಅನುಷ್ಠಾನದ ಪಡೆಯಲ್ಲಿ ಪ್ರಮುಖ ಸೇನಾನಿಯೂ ಹೌದು. ಈಶ್ವರಪ್ಪ ಹಿಂದುತ್ವದ ಪರ ಮಾತಾಡಿದರೆ ಚನ್ನಬಸಪ್ಪ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂಬ ಮಾತು ಶಿವಮೊಗ್ಗದಲ್ಲಿ ಜನಜನಿತವಾಗಿದೆ.