‘ದೇಶವನ್ನು ವಿಭಜಿಸುವ, ದುರ್ಬಲಗೊಳಿಸುವ ಅಪಾಯಕಾರಿ ಉದ್ದೇಶವನ್ನು ಕಾಂಗ್ರೆಸ್ ಹೊಂದಿದ್ದು, ಅದು ತುಕ್ಡೆ ತುಕ್ಡೆ ಗ್ಯಾಂಗ್ನ ಸುಲ್ತಾನನಂತಿದೆ’ ಎಂದು ಪ್ರಧಾನಿ ನರೇಂದ್ರಮೋದಿ ಟೀಕಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಈ ದೇಶದ ತಾಯಂದಿರು ತಮ್ಮ ಮಕ್ಕಳು ದೇಶಕ್ಕೆ ಸೇವೆ ಸಲ್ಲಿಸಲಿ ಎಂದು ಅವರನ್ನು ಸೇನೆಗೆ ಸೇರಿಸುತ್ತಿದ್ಧಾರೆ. ಆದರೆ, ಈ ಕಾಂಗ್ರೆಸ್ನವರು ತುಕ್ಡೆ ತುಕ್ಡೆ ಗ್ಯಾಂಗ್ನ ಪರವಾಗಿದ್ದಾರೆ’ ಎಂದು ದೂರಿದರು.