ಜನಾರ್ದನ ರೆಡ್ಡಿ ಆಗಮನವು ಪಕ್ಷಕ್ಕೆ ಒಳ್ಳೆಯದನ್ನೇ ಮಾಡಲಿದೆ. ಲೋಕಸಭಾ ಚುನಾವಣೆಯಲ್ಲಿ ಈ ಅಂಶವೂ ಕೆಲಸ ಮಾಡಲಿದೆ. ಬಳ್ಳಾರಿಯಲ್ಲಿ ಪಕ್ಷ ಕಟ್ಟಲು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಪಾತ್ರ ಮಹತ್ವದ್ದು.
– ಸೋಮಶೇಖರ ರೆಡ್ಡಿ ಮಾಜಿ ಶಾಸಕ
ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ನಡೆಯಿತು. ಬಿಜೆಪಿ ಸೇರುವ ಜನಾರ್ದನ ರೆಡ್ಡಿ ಅವರ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ನಾಯಕರು ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ.
– ದಮ್ಮುರು ಶೇಖರ್ ಕೆಆರ್ಪಿಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ
ಅವರು ಬಿಜೆಪಿಯಲ್ಲೇ ಇದ್ದರು. ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಿದ್ದವರು. ಅವರು ಬಿಜೆಪಿಗೇ ಸೇರಲಿದ್ದಾರೆ ಎಂಬುದು ಮೊದಲೇ ಗೊತ್ತಿತ್ತು. ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ.
– ಮಹಮೊದ್ ರಫೀಕ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಕೆಆರ್ಪಿಸಿ ಸಾಧನೆ
ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆಆರ್ಪಿಸಿ ಸಾಧನೆ ಬಳ್ಳಾರಿ ನಗರ– 48577 ಸಂಡೂರು 31375 ಹೂವಿನಹಡಗಲಿ– 286 ಹಗರಿಬೊಮ್ಮನಹಳ್ಳಿ– 185 (ಬಳ್ಳಾರಿ ಗ್ರಾಮಾಂತರ ಕಂಪ್ಲಿ ವಿಜಯನಗರ ಮತ್ತು ಕೂಡ್ಲಿಗಿಗಳಲ್ಲಿ ಸ್ಪರ್ಧೆ ಇರಲಿಲ್ಲ)
ಕಾಂಗ್ರೆಸ್ ಒಲವು ನಿಜಯವೇ?
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಮಾತುಗಳು ವ್ಯಕ್ತವಾಗಿತ್ತಾದರೂ ಅದು ಈಗ ಹುಸಿಯಾಗಿದೆ. ಗಂಗಾವತಿ ಕ್ಷೇತ್ರಕ್ಕೆ ದೊರೆತ ಅನುದಾನದ ಋಣ ಸಂದಾಯಕ್ಕಷ್ಟೇ ಅವರ ಬೆಂಬಲ ಸೀಮಿತ ಎಂದು ಬಲ್ಲ ಮೂಲಗಳು ತಿಳಿಸಿವೆ.