<p><strong>ಶಿರಸಿ</strong>: ‘ಲೋಕಸಭಾ ಚುನಾವಣೆಗೆ ನಿಂತವರು ಅವರ ಕೆಲಸ ಮಾಡುತ್ತಾರೆ. ಅವರೊಟ್ಟಿಗೆ ನಾವು ಪ್ರಚಾರಕ್ಕೆ ಹೋಗಬೇಕೆ ಅಥವಾ ಬೇಡವೇ ಎಂಬುದು ಇನ್ನೂ ನಿರ್ಣಯವಾಗಿಲ್ಲ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.</p>.<p>‘ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಮಾಧಾನ, ಅಸಮಾಧಾನಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ಹೈಕಮಾಂಡ್ಗೆ ಸಮಾಧಾನವಾದರೆ ಆಯಿತು. ಈ ಹಿಂದೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಶಿರಸಿಯಲ್ಲಿ ಎರಡು ಸಭೆ ನಡೆದಿದ್ದವು. ಆಗ ನನಗೆ ಭಾಗಿಯಾಗಲು ಆಗಿರಲಿಲ್ಲ. ನಂತರ ಸಭೆಯ ಮಾಹಿತಿ ನೀಡಿಲ್ಲ, ಅಭಿಪ್ರಾಯ ಸಹ ಕೇಳಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.</p>.<div><blockquote>ಯಾವ ಕಾಲದಲ್ಲಿ ಯಾರೆಲ್ಲ ಪಕ್ಷದ ಚೌಕಟ್ಟಿನಿಂದ ಅಂತರ ಕಾಯ್ದುಕೊಂಡರು ಎಂಬುದು ಗೊತ್ತಿದೆ. ನನ್ನ ವಿರುದ್ಧ ಪೋಸ್ಟರ್ ಹಚ್ಚಿದವರು ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರಿಗೆ ಆತ್ಮತೃಪ್ತಿಯಾದರೆ ಸಾಕು.</blockquote><span class="attribution">ಶಿವರಾಮ ಹೆಬ್ಬಾರ್, ಶಾಸಕ</span></div>.<p>‘ಯಾವ ರಾಜಕೀಯ ಪಕ್ಷವೂ ತನ್ನತ್ತ ಬಂದವರನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಪಕ್ಷಗಳಲ್ಲೂ ಪಕ್ಷಾಂತರಗಳಾಗಿವೆ. ಯಾರೂ ಯಾವುದೇ ಪಕ್ಷಕ್ಕೆ ಗುತ್ತಿಗೆಯಲ್ಲ. ರಾಜಕೀಯದಲ್ಲಿ ಎಲ್ಲರಿಗೂ ಒಂದೇ ಕಾನೂನಿರಬೇಕು’ ಎಂದ ಅವರು ತಿಳಿಸಿದರು.</p>.<p>‘ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ. ಹೋಗುವುದಿದ್ದರೆ ಎಲ್ಲ ಹೇಳಿಯೇ ಹೋಗುವೆ. ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇರುವ ನನಗೆ ಯಾವುದು ಕಲ್ಪಿತ, ಕಪೋಲ ಕಲ್ಪಿತ ಹೇಳುವಷ್ಟು ಶಕ್ತಿಯಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ‘ಲೋಕಸಭಾ ಚುನಾವಣೆಗೆ ನಿಂತವರು ಅವರ ಕೆಲಸ ಮಾಡುತ್ತಾರೆ. ಅವರೊಟ್ಟಿಗೆ ನಾವು ಪ್ರಚಾರಕ್ಕೆ ಹೋಗಬೇಕೆ ಅಥವಾ ಬೇಡವೇ ಎಂಬುದು ಇನ್ನೂ ನಿರ್ಣಯವಾಗಿಲ್ಲ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.</p>.<p>‘ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಮಾಧಾನ, ಅಸಮಾಧಾನಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ಹೈಕಮಾಂಡ್ಗೆ ಸಮಾಧಾನವಾದರೆ ಆಯಿತು. ಈ ಹಿಂದೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಶಿರಸಿಯಲ್ಲಿ ಎರಡು ಸಭೆ ನಡೆದಿದ್ದವು. ಆಗ ನನಗೆ ಭಾಗಿಯಾಗಲು ಆಗಿರಲಿಲ್ಲ. ನಂತರ ಸಭೆಯ ಮಾಹಿತಿ ನೀಡಿಲ್ಲ, ಅಭಿಪ್ರಾಯ ಸಹ ಕೇಳಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.</p>.<div><blockquote>ಯಾವ ಕಾಲದಲ್ಲಿ ಯಾರೆಲ್ಲ ಪಕ್ಷದ ಚೌಕಟ್ಟಿನಿಂದ ಅಂತರ ಕಾಯ್ದುಕೊಂಡರು ಎಂಬುದು ಗೊತ್ತಿದೆ. ನನ್ನ ವಿರುದ್ಧ ಪೋಸ್ಟರ್ ಹಚ್ಚಿದವರು ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರಿಗೆ ಆತ್ಮತೃಪ್ತಿಯಾದರೆ ಸಾಕು.</blockquote><span class="attribution">ಶಿವರಾಮ ಹೆಬ್ಬಾರ್, ಶಾಸಕ</span></div>.<p>‘ಯಾವ ರಾಜಕೀಯ ಪಕ್ಷವೂ ತನ್ನತ್ತ ಬಂದವರನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಪಕ್ಷಗಳಲ್ಲೂ ಪಕ್ಷಾಂತರಗಳಾಗಿವೆ. ಯಾರೂ ಯಾವುದೇ ಪಕ್ಷಕ್ಕೆ ಗುತ್ತಿಗೆಯಲ್ಲ. ರಾಜಕೀಯದಲ್ಲಿ ಎಲ್ಲರಿಗೂ ಒಂದೇ ಕಾನೂನಿರಬೇಕು’ ಎಂದ ಅವರು ತಿಳಿಸಿದರು.</p>.<p>‘ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ. ಹೋಗುವುದಿದ್ದರೆ ಎಲ್ಲ ಹೇಳಿಯೇ ಹೋಗುವೆ. ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇರುವ ನನಗೆ ಯಾವುದು ಕಲ್ಪಿತ, ಕಪೋಲ ಕಲ್ಪಿತ ಹೇಳುವಷ್ಟು ಶಕ್ತಿಯಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>