ಮಂಡ್ಯ:ಮಂಡ್ಯ ಲೋಕಸಭಾ ಕ್ಷೇತ್ರದ ಕಣದಲ್ಲಿ ಸಿನಿಮೀಯ ಬೆಳವಣಿಗೆಗಳು ನಡೆಯುತ್ತಿವೆ ಎನ್ನಲು ಕಡೆ ಕ್ಷಣದಲ್ಲಿ ಮಂಗಳವಾರ ಸುಮಲತಾ ಹೆಸರಿನ ಮೂವರು ನಾಮಪತ್ರ ಸಲ್ಲಿಸಿರುವುದೇ ಸಾಕ್ಷಿಯಾಗಿದೆ.
ಕೆ.ಆರ್.ಪೇಟೆ ತಾಲ್ಲೂಕು, ಗೊರವಿ ಗ್ರಾಮದ ಸುಮಲತಾ ಮಂಜೇಗೌಡ, ಕನಕಪುರದ ಸುಮಲತಾ ದರ್ಶನ್, ಶ್ರೀರಂಗಪಟ್ಟಣದ ಸುಮಲತಾ ಸಿದ್ದೇಗೌಡ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸುಮಲತಾ ಅಂಬರೀಷ್ ಸೇರಿ ನಾಲ್ವರು ಒಂದೇ ಹೆಸರಿನ ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆಯಾಗಿವೆ.