ರಾಜಕೀಯದಲ್ಲಿ ಸಿನಿಮಾ ನಟರು ಯಶಸ್ಸು ಸಾಧಿಸಿದ ಉದಾಹರಣೆ ಆಂಧ್ರಪ್ರದೇಶದಲ್ಲಿ ಮಾತ್ರ ಸಾಧ್ಯ. ಕರ್ನಾಟಕದಲ್ಲಿ ಅಂಥದ್ದು ನಡೆದಿಲ್ಲ. ನಟ ಎನ್ಟಿಆರ್ ಅವರು ಈ ಹಿಂದೆ ರಾಯಚೂರು, ಸಿಂಧನೂರಿಗೆ ಪ್ರಚಾರಕ್ಕೆ ಬಂದಿರುವಾಗ ಲಕ್ಷಾಂತರ ಜನರು ಸೇರಿದ್ದರು. ಆದರೆ, ಎನ್ಟಿಆರ್ ನೋಡಿಕೊಂಡು ಯಾರೂ ಮತ ಹಾಕಲಿಲ್ಲ. ಶಿವಮೊಗ್ಗ ವಿಧಾನಸಭೆ ಕ್ಷೇತ್ರಕ್ಕೆ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದಾಗ ಚಿತ್ರರಂಗದವರು ಪ್ರಚಾರ ನಡೆಸಿದ್ದರು. ಆದರೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂದರು.