ಈ ದೂರನ್ನು ಪರಿಶೀಲನೆ ನಡೆಸಿದ್ದ ಮೈಸೂರು ನಾಗರಿಕ ಜಿಲ್ಲಾ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ಇದರ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆ ಹೊಂದಿದ ಜಾತಿ ಪರಿಶೀಲನಾ ಸಮಿತಿಗೆ ನೀಡಿತ್ತು. ವಿಚಾರಣೆ ಬಳಿಕ ಸಮಿತಿಯು, ‘ಸಿದ್ದರಾಜು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ’ ಎಂದು ನಿರ್ಧರಿಸಿ ಈ ಕುರಿತಂತೆ ಸಂಬಂಧಿಸಿದ ತಹಶೀಲ್ದಾರ್ಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಿತ್ತು.