ಗುರುವಾರವಿಡೀ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ನಿಖಿಲ್ ಪ್ರಚಾರ ನಡೆಸಿದರು. ಅಭಿಮಾನಿಗಳಿಗೆ ಹಸ್ತಲಾಘವ ನೀಡುವ ಸಂದರ್ಭದಲ್ಲಿ ಅವರ ಬಲಗೈಗೆ ಪೆಟ್ಟಾಗಿತ್ತು. ಕೈಗೆ ಬ್ಯಾಂಡ್ಏಡ್ ಸುತ್ತಿಕೊಂಡಿದ್ದ ಅವರು ಪ್ರಚಾರ ಮುಂದುವರಿಸಿದ್ದರು. ಆದರೆ ಕೈನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರು ವಿಶ್ರಾಂತಿಗೆ ಮೊರೆ ಹೋದರು. ಅವರ ಗೈರುಹಾಜರಿಯಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಪ್ರಚಾರ ನಡೆಸಿದರು. ನಿಖಿಲ್ ಗುಣಮುಖರಾಗಿದ್ದು ಶನಿವಾರದಿಂದ ಎಂದಿನಂತೆ ಪ್ರಚಾರ ಮುಂದುವರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.