ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜನಾರ್ದನ ಪೂಜಾರಿ ಪಾಲ್ಗೊಂಡರು. ವಿವಿಧ ದೇವಾಲಯ, ಮಸೀದಿ, ಚರ್ಚ್ಗಳ ಭೇಟಿ ಮುಗಿಸಿ ಸಭೆಗೆ ಬಂದ ಮಿಥುನ್, ವೇದಿಕೆಯಲ್ಲಿದ್ದ ಪೂಜಾರಿ ಮತ್ತು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಮಿಥುನ್ ರೈ ಅವರ ತಂದೆ ಡಾ.ಮಹಾಬಲ ರೈ, ಅಣ್ಣಂದಿರಾದ ಡಾ.ಮಯೂರ್ ರೈ ಮತ್ತು ಡಾ.ಮನೀಶ್ ರೈ ಅವರನ್ನು ವೇದಿಕೆ ಮೇಲೆ ಕರೆದ ಪೂಜಾರಿ, ಮಿಥುನ್ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡೇ ಮಾತನಾಡಿದರು.