ಸುಮಲತಾ ವಿರುದ್ಧ ಆಕ್ರೋಶ: ‘ಪಕ್ಷೇತರ ಅಭ್ಯರ್ಥಿ ಪದೇ ಪದೇ ನನ್ನನ್ನು, ಹಾಸನದವರು ಎಂದು ಟೀಕೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರ ತೀರ್ಮಾನದಂತೆ ಸ್ಪರ್ಧೆ ಮಾಡಿದ್ದೇನೆ. ಅವರಿಗೆ ಸೋಲಿನ ಭಯ ಕಾಡುತ್ತಿರುವ ಕಾರಣ ಹಾಗೆ ಮಾತನಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯನ್ನು ಕೇಳಿ ಚುನಾವಣೆಗೆ ನಿಲ್ಲಬೇಕಿತ್ತಾ’ ಎಂದು ಸುಮಲತಾ ಹೆಸರು ಹೇಳದೆ ಪ್ರಶ್ನಿಸಿದರು.