ಕಾಸರವಳ್ಳಿ ನಿರ್ದೇಶನದ ಈ ಹೊಸ ಸಿನಿಮಾ ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ಅವರ 1992ರಲ್ಲಿ ಪ್ರಕಟವಾದ ‘ಹಾಲಿನ ಮೀಸೆ’ ಸಣ್ಣಕಥೆಯನ್ನು ಆಧರಿಸಿದ್ದು, ಹಳ್ಳಿಯಿಂದ ನಗರಕ್ಕೆ ವಲಸೆ ಬಂದ ಬಾಲಕನೊಬ್ಬನ ತಲ್ಲಣವನ್ನು ಹೇಳುತ್ತದೆ. ಇದು ಅವರು ನಿರ್ದೇಶಿಸುತ್ತಿರುವ 14ನೇ ಸಿನಿಮಾ. ಅವರು ನಿರ್ದೇಶಿಸಿರುವ ‘ತಬರನ ಕಥೆ’, ‘ಘಟಶ್ರಾದ್ಧ’, ‘ತಾಯಿ ಸಾಹೇಬ’ ಮತ್ತು ‘ದ್ವೀಪ’ ಚಿತ್ರಗಳು ‘ಅತ್ಯುತ್ತಮ ಸಿನಿಮಾ’ ಎಂದು ರಾಷ್ಪ್ರ ಪ್ರಶಸ್ತಿ ಗೆದ್ದುಕೊಂಡಿವೆ.