<p>ಕನ್ನಡ ಮತ್ತು ಸಂಸ್ಕೃತದಲ್ಲಿ ನಿರ್ಮಾಣವಾಗಿರುವ ‘ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ.</p>.<p>ಈ ಚಿತ್ರವನ್ನು ರಾಜಾ ರವಿಶಂಕರ್ ನಿರ್ದೇಶಿಸಿದ್ದಾರೆ. ರವಿಶಂಕರ್ ಉಪೇಂದ್ರ ಅಭಿನಯದ ‘ಶ್ರೀಮತಿ’, ‘ಅಷ್ಟಾವಕ್ರ’ ಹಾಗೂ ‘ಭಗವದ್ ಶ್ರೀರಾಮಾನುಜಾಚಾರ್ಯ’ ಚಿತ್ರಗಳನ್ನು ನಿರ್ದೇಶಿಸಿದ್ದವರು.</p>.<p>ಶ್ರೀಶಂಕರಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್, ಇನ್ನುಳಿದ ಪಾತ್ರಗಳಲ್ಲಿ ರಾಮಕೃಷ್ಣ, ಪ್ರಥಮಪ್ರಸಾದ್, ವಿನಯಪ್ರಸಾದ್,̧ ಸಾಯಿಪ್ರಕಾಶ್, ಭರತ್ ಕಲ್ಯಾಣ್, ಮೂಗು ̧ಸುರೇಶ್, ಮೈಕೋಮಂಜು, ತೇಜಸ್ವಿನಿ, ಸುರೇಖ, ಮಾಸ್ಟರ್ ಲಿಖಿತ್ ಶರ್ಮ, ಮಾಸ್ಟರ್ ರೋಹಿತ್ಶರ್ಮ ನಟಿಸಿದ್ದಾರೆ.</p>.<p>ಡಾ. ಆರೂಢ ಸ್ವಾಮೀಜಿ ಈ ಚಿತ್ರದ ಸಂಸ್ಕೃತ ಅವತರಣಿಕೆಗೆ ಸಂಭಾಷಣೆ ರಚಿಸಿ, ವ್ಯಾಷ ಮಹರ್ಷಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.</p>.<p>ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ವೈ.ಎನ್.ಶರ್ಮ ಮತ್ತು ವಿಜಯಲಕ್ಷ್ಮಿ ಅವರು ಯಮ್ಮನೂರು ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.</p>.<p>ಛಾಯಾಗ್ರಹಣ ಸಿ. ನಾರಾಯಣ, ಸಂಗೀತ ಅರ್ಜುನ್ ಜನ್ಯ, ಸಂಕಲನ ಆರ್.ದೊರೈರಾಜ್, ಪ್ರಸಾಧನ ಕುಮಾರ್ ನೊಣವಿನಕೆರೆ, ವಸ್ತ್ರಾಲಂಕಾರ ಕೆ. ಚಂದ್ರಚಾರಿ, ಕಲಾ ನಿರ್ದೇಶನ ಕುಮಾರ್(ಎನ್.ಕೆ) ಸಹ ನಿರ್ದೇಶನ ಎಂ.ಜಿ. ಜಗದೀಶ್ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಮತ್ತು ಸಂಸ್ಕೃತದಲ್ಲಿ ನಿರ್ಮಾಣವಾಗಿರುವ ‘ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿದೆ.</p>.<p>ಈ ಚಿತ್ರವನ್ನು ರಾಜಾ ರವಿಶಂಕರ್ ನಿರ್ದೇಶಿಸಿದ್ದಾರೆ. ರವಿಶಂಕರ್ ಉಪೇಂದ್ರ ಅಭಿನಯದ ‘ಶ್ರೀಮತಿ’, ‘ಅಷ್ಟಾವಕ್ರ’ ಹಾಗೂ ‘ಭಗವದ್ ಶ್ರೀರಾಮಾನುಜಾಚಾರ್ಯ’ ಚಿತ್ರಗಳನ್ನು ನಿರ್ದೇಶಿಸಿದ್ದವರು.</p>.<p>ಶ್ರೀಶಂಕರಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್, ಇನ್ನುಳಿದ ಪಾತ್ರಗಳಲ್ಲಿ ರಾಮಕೃಷ್ಣ, ಪ್ರಥಮಪ್ರಸಾದ್, ವಿನಯಪ್ರಸಾದ್,̧ ಸಾಯಿಪ್ರಕಾಶ್, ಭರತ್ ಕಲ್ಯಾಣ್, ಮೂಗು ̧ಸುರೇಶ್, ಮೈಕೋಮಂಜು, ತೇಜಸ್ವಿನಿ, ಸುರೇಖ, ಮಾಸ್ಟರ್ ಲಿಖಿತ್ ಶರ್ಮ, ಮಾಸ್ಟರ್ ರೋಹಿತ್ಶರ್ಮ ನಟಿಸಿದ್ದಾರೆ.</p>.<p>ಡಾ. ಆರೂಢ ಸ್ವಾಮೀಜಿ ಈ ಚಿತ್ರದ ಸಂಸ್ಕೃತ ಅವತರಣಿಕೆಗೆ ಸಂಭಾಷಣೆ ರಚಿಸಿ, ವ್ಯಾಷ ಮಹರ್ಷಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.</p>.<p>ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ವೈ.ಎನ್.ಶರ್ಮ ಮತ್ತು ವಿಜಯಲಕ್ಷ್ಮಿ ಅವರು ಯಮ್ಮನೂರು ಕ್ರಿಯೇಷನ್ಸ್ ಲಾಂಛನದಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.</p>.<p>ಛಾಯಾಗ್ರಹಣ ಸಿ. ನಾರಾಯಣ, ಸಂಗೀತ ಅರ್ಜುನ್ ಜನ್ಯ, ಸಂಕಲನ ಆರ್.ದೊರೈರಾಜ್, ಪ್ರಸಾಧನ ಕುಮಾರ್ ನೊಣವಿನಕೆರೆ, ವಸ್ತ್ರಾಲಂಕಾರ ಕೆ. ಚಂದ್ರಚಾರಿ, ಕಲಾ ನಿರ್ದೇಶನ ಕುಮಾರ್(ಎನ್.ಕೆ) ಸಹ ನಿರ್ದೇಶನ ಎಂ.ಜಿ. ಜಗದೀಶ್ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>