ಅನಾರೋಗ್ಯ ಪೀಡಿತರಾಗಿದ್ದ ಮುನುಸ್ವಾಮಿ ತೆವಳುತ್ತ ರಸ್ತೆ ದಾಟುತ್ತಿರುವಾಗ ಕಾರು ಅವರ ಮೇಲೆ ಹರಿದಿದೆ. ಈ ಕಾರು ಶಿಂಬು ಹೆಸರಿನಲ್ಲಿ ನೋಂದಣಿಯಾಗಿದೆ ಎಂದುತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಪೊಲೀಸರು ಶಿಂಬು ತಂದೆ ರಾಜೇಂದ್ರನ್ ಅವರ ಕಾರು ಚಾಲಕ ಸೆಲ್ವಂ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಶಿಂಬು ಇದ್ದರೇ? ಅಥವಾ ಯಾರೆಲ್ಲ ಇದ್ದರು? ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.