ಚೆನ್ನೈ: ಹಿರಿಯ ನಟ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನಿಸಿ ಆಮಂತ್ರಣ ಪತ್ರಿಕೆ ನೀಡಲಾಗಿದೆ.
ಬಿಜೆಪಿ ನಾಯಕ ರಾ.ಅರ್ಜುನಮೂರ್ತಿ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿದ ಕುರಿತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಫೋಟೊದಲ್ಲಿ ರಜನಿಕಾಂತ್ ಮತ್ತು ಇತರ ನಾಯಕರು ಆಹ್ವಾನ ಪತ್ರಿಕೆಯನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅರ್ಜುನಮೂರ್ತಿಯವರು, ‘ಇಂದಿನ ಕಾರ್ಯಕ್ರಮ ನನ್ನ ಜೀವನದ ಉತ್ತಮ ಅನುಭವ’ ಎಂದು ಬರೆದುಕೊಂಡಿದ್ದಾರೆ.