‘ಕನ್ನಡದ ನೇಟಿವಿಟಿಗೆ ತಕ್ಕಂತೆ ಮೂಲ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರಕಥೆ, ಸಂಭಾಷಣೆಯಲ್ಲಿ ಸಂಪೂರ್ಣ ಬದಲಾವಣೆ ಕಾಣಬಹುದು. ರವಿಚಂದ್ರನ್ ಅವರ ಹೊಸ ಲುಕ್ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎನ್ನುವುದು ಶಿವಗಣೇಶ್ ಅವರ ವಿಶ್ವಾಸ. ಚಿತ್ರಕ್ಕೆ ಬಂಡವಾಳ ಹೂಡಿರುವುದು ಕೆ. ಮಂಜು. ಗೌತಮ್ ಶ್ರೀವತ್ಸ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ ವಿನೋದ್ ಭಾರತಿ ಅವರದು. ಮೃಗಶಿರ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ನಿಸರ್ಗ, ಅರ್ಜುನ್ ಗೌಡ, ಯಶ್ ಶೆಟ್ಟಿ, ಚೈತ್ರಾ ಆಚಾರ್, ಅಚ್ಯುತ್ಕುಮಾರ್, ರಮೇಶ್ ಭಟ್ ತಾರಾಗಣದಲ್ಲಿದ್ದಾರೆ.