ಹಾಗಿದ್ದರೆ ನಿಮ್ಮ ಮುಂದಿನ ಚಿತ್ರವೂ ’ಭಾರತ್’ ಆಗಿರುತ್ತದೆಯೇ ಎಂದು ಮತ್ತೊಬ್ಬರು ಕೇಳಿದ್ದಾರೆ. ಕಳೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ಪೌರತ್ವ ಪಡೆದಿರುವ ಅಕ್ಷಯ್ ಕುಮಾರ್ ಅವರ ಕೆನಡಾ ಪೌರತ್ವದ ಕುರಿತೂ ಎಕ್ಸ್ ವೇದಿಕೆಯಲ್ಲಿ ಚರ್ಚೆಗಳು ನಡೆದಿವೆ.
ಮಿಷನ್ ರಾಣಿಗಂಜ್ ಚಿತ್ರವು ಕಲ್ಲಿದ್ದಲ್ಲಿ ಗಣಿ ಕುರಿತಾಗಿದ್ದು, ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಎಂಬುವವರ ಜೀವನಾಧಾರಿತವಾಗಿದೆ. 1989ರಲ್ಲಿ ಕಲ್ಲಿದ್ದಲ್ಲು ಗಣಿಯಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು. ಚಿತ್ರದಲ್ಲಿ ಪರಿಣೀತಿ ಛೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ವಿಜೇಂದ್ರ ಸೆಕ್ಸೆನಾ ನಟಿಸಿದ್ದಾರೆ. ಟಿನು ಸುರೇಶ್ ದೇಸಾಯಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ