ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರು ನಟರ ಮಕ್ಕಳ ಜೊತೆ ಕೆಲಸ: ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಅಮಿತಾಭ್

Last Updated 24 ಜನವರಿ 2020, 5:37 IST
ಅಕ್ಷರ ಗಾತ್ರ

‘ಭಾರತೀಯ ಸಿನಿಮಾ ಕ್ಷೇತ್ರದ ಮೂವರುಮೇರು ನಟರ ಮಕ್ಕಳ ಜೊತೆ ಕೆಲಸ ಮಾಡಿದ್ದು ನನಗೂ ಮತ್ತು ಜಯಾಗೂ ಐತಿಹಾಸಿಕ ಕ್ಷಣ’ ಎಂದು ಅಮಿತಾಭ್‌ ಬಚ್ಚನ್‌ ಟ್ವೀಟ್‌ ಮಾಡಿದ್ದಾರೆ.

ಕಲ್ಯಾಣ್ ಜ್ಯುವೆಲ್ಲರ್ಸ್‌ ಜಾಹೀರಾತಿನ ಶೂಟ್‌ನಲ್ಲಿ ತೆಲುಗು ನಟ ಅಕ್ಕಿನೇನಿ ನಾಗೇಶ್ವರ್ ಅವರ ಮಗ ನಾಗಾರ್ಜುನ್‌, ಕನ್ನಡದ ರಾಜ್‌ಕುಮಾರ್‌ ಅವರ ಮಗ ಶಿವರಾಜ್‌ಕುಮಾರ್‌ ಹಾಗೂ ‌ತಮಿಳಿನ ಶಿವಾಜಿ ಗಣೇಶನ್ ಅವರ ಮಗ ಪ್ರಭು ಅವರ ಜೊತೆ ಅಮಿತಾಭ್‌ ಬಚ್ಚನ್‌ ಮತ್ತು ಜಯಾ ಬಚ್ಚನ್‌ ಇರುವ ಫೋಟೊವೊಂದನ್ನು ಟ್ವೀಟ್‌ ಮಾಡಿ, ‘ಈ ಇವರ ಜೊತೆ ಕೆಲಸ ಮಾಡುವುದು ಎಂಥ ಗೌರವ’ ಎಂಬ ಒಕ್ಕಣೆಯನ್ನು ಬಚ್ಚನ್‌ ಬರೆದುಕೊಂಡಿದ್ದಾರೆ.

ಬಚ್ಚನ್‌ ಅವರ ಟ್ವೀಟ್‌ಗೆ ನಟ ಶಿವರಾಜ್‌ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಅಮಿತಾಬ್ ಬಚ್ಚನ್‌, ಜಯಾ ಬಚ್ಚನ್‌, ನಾಗಾರ್ಜುನ್‌, ಶಿವರಾಜ್‌ಕುಮಾರ್ ಮತ್ತು ಪ್ರಭು ಅವರು ಕಲ್ಯಾಣ್‌ ಜ್ಯುವೆಲ‌ರ್ಸ್‌ನ ಪ್ರಚಾರ ರಾಯಭಾರಿಗಳಾಗಿದ್ದಾರೆ.

ಬಚ್ಚನ್‌ಟ್ವಿಟ್‌ ಮಾಡಿದ 15 ನಿಮಿಷದಲ್ಲೇ ಅದನ್ನು 134 ಮಂದಿ ಮರು ಟ್ವೀಟ್‌ ಮಾಡಿಕೊಂಡಿದ್ದು, ಸುಮಾರು3 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. ಅಲ್ಲದೇ ಅನೇಕರು ಅಮಿತಾಭ್‌ ಅವರ ಹಳೆಯ ಫೋಟೊಗಳನ್ನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT