‘ಅಪ್ಪ ಸೇನೆಯಲ್ಲಿದ್ದಾಗ ಬಹಳಷ್ಟು ವರ್ಷಗಳ ಕಾಲ ನಮ್ಮ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಾನು ಕಾಲೇಜು ಓದಿದ್ದು ಬೆಂಗಳೂರಿನಲ್ಲಿ. ನಾನಾಗ ಪಿಯುಸಿ ಓದುತ್ತಿದ್ದೆ. ಪ್ರತಿದಿನ ಅಪ್ಪ ಕಾರಿನಲ್ಲಿ ನನ್ನನ್ನು ಕಾಲೇಜಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಕಾರಿನಲ್ಲಿ ಅಪ್ಪ ಹೇಳುತ್ತಿದ್ದ ಬುದ್ದಿಮಾತು ಇಂದಿಗೂ ನನ್ನನ್ನು ಜೋಪಾನವಾಗಿ ಕೈ ಹಿಡಿದು ನಡೆಸುತ್ತಿವೆ’ ಎಂದು ಗುಳಿಕೆನ್ನೆ ಚೆಲುವೆ ಹೇಳಿದ್ದಾರೆ.