ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಷಡ್ವರ್ಗ ಟ್ರೈಲರ್‌ ಬಿಡುಗಡೆ

Last Updated 13 ನವೆಂಬರ್ 2020, 11:56 IST
ಅಕ್ಷರ ಗಾತ್ರ

ಅರಿಷಡ್ವರ್ಗ ಹೊಸ ಬಗೆಯಕುತೂಹಲಕರ ಕಥಾ ವಸ್ತುವುಳ್ಳ ಚಿತ್ರ ನ. 7ರಂದು ಬಿಡುಗಡೆಯಾಗುತ್ತಿದೆ. ಅರವಿಂದ ಕಾಮತ್‌ ಅವರ ನಿರ್ದೇಶನ, ನಿರ್ಮಾಣದ ಚಿತ್ರ ಇದು. ಚಿತ್ರದ ಟ್ರೈಲರ್‌ ಈಗಾಗಲೇ ಯೂಟ್ಯೂಬ್‌ನಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

ಬೆಂಗಳೂರಿನಲ್ಲಿ ಉದ್ಯಮಿ ಮಂಜುನಾಥ್‌ ಭಟ್‌ ಅವರ ಕೊಲೆ ಪ್ರಕರಣದ ಸುತ್ತ ಕತೆ ಹೆಣೆಯಲಾಗಿದೆ ಎಂದು ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಅವಿನಾಶ್‌, ಸಂಯುಕ್ತಾ ಹೊರನಾಡು, ಮಹೇಶ್‌ ಬಂಡಾ, ಶ್ರೀಪತಿ ಮಂಜನಬೈಲು. ಅರವಿಂದ್‌ ಕುಪ್ಲೀಕರ್‌ ಅವರ ತಾರಾಗಣವಿದೆ. ಉದಿತ್‌ ಹರಿತಾಸ್‌ ಅವರ ಸಂಗೀತವಿದೆ. ಪವನ್‌ ಕುಮಾರ್‌ ಆರ್‌. ಅವರು ಸಾಹಿತ್ಯ ಬರೆದಿದ್ದಾರೆ. ಬಾಲಾಜಿ ಮನೋಹರ್‌ ಅವರ ಛಾಯಾಗ್ರಹಣವಿದೆ.

ಟ್ರೈಲರನ್ನುಈಗಾಗಲೇ ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT