<p>ಪತ್ರಕರ್ತ ಹಾಗೂ ಲೇಖಕ ಕುಮಾರ ಬೇಂದ್ರೆ ನಿರ್ದೇಶನದ ‘ಬಂಧಮುಕ್ತ’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. </p>.<p>‘ಜೀವ ಬಯಸಿದ ಭಾವವೇ ಎದೆಯಲ್ಲರಳಿ ನಿಂತು..’ ಎಂಬ ಈ ಗೀತೆಗೆ ನಿರ್ದೇಶಕರದ್ದೇ ಸಾಹಿತ್ಯವಿದ್ದು, ಸಿದ್ದೇಶ್ವರ ಕಟಕೋಳ ಸಂಗೀತ, ರಾಧಿಕಾ ಕುಲಕರ್ಣಿ ಅವರ ಧ್ವನಿಯಿದೆ.</p>.<p>‘ಈ ಚಿತ್ರ ಮಹಿಳಾ ಸಬಲೀಕರಣದ ಆಶಯವನ್ನು ಹೊಂದಿದ್ದು, ಬಡ ಯುವತಿಯೊಬ್ಬಳು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ಮಾಡುವ ಹೋರಾಟದ ಕಥೆ ಇದರಲ್ಲಿದೆ. ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಇಂತಹ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕ ಅದರ ಉದ್ದೇಶವನ್ನು ಈಡೇರಿಸಬೇಕು’ ಎಂದು ಲಾಡ್ ಹೇಳಿದರು.</p>.<p>ಶಿವಪುತ್ರಪ್ಪ ಆಶಿ ಬಂಡವಾಳ ಹೂಡಿದ್ದಾರೆ. ಐಶ್ವರ್ಯ ನಾಗರಾಜ್, ಸನತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಘ್ನೇಶ್ ಮಲಚಮಿ ಛಾಯಾಚಿತ್ರಗ್ರಹಣ, ಸತ್ಯಜಿತ್ ಸಂಕಲನ, ಬಹುರೂಪಿ ಹಿನ್ನೆಲೆ ಸಂಗೀತವಿದೆ. ಫೆಬ್ರುವರಿಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪತ್ರಕರ್ತ ಹಾಗೂ ಲೇಖಕ ಕುಮಾರ ಬೇಂದ್ರೆ ನಿರ್ದೇಶನದ ‘ಬಂಧಮುಕ್ತ’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. </p>.<p>‘ಜೀವ ಬಯಸಿದ ಭಾವವೇ ಎದೆಯಲ್ಲರಳಿ ನಿಂತು..’ ಎಂಬ ಈ ಗೀತೆಗೆ ನಿರ್ದೇಶಕರದ್ದೇ ಸಾಹಿತ್ಯವಿದ್ದು, ಸಿದ್ದೇಶ್ವರ ಕಟಕೋಳ ಸಂಗೀತ, ರಾಧಿಕಾ ಕುಲಕರ್ಣಿ ಅವರ ಧ್ವನಿಯಿದೆ.</p>.<p>‘ಈ ಚಿತ್ರ ಮಹಿಳಾ ಸಬಲೀಕರಣದ ಆಶಯವನ್ನು ಹೊಂದಿದ್ದು, ಬಡ ಯುವತಿಯೊಬ್ಬಳು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ಮಾಡುವ ಹೋರಾಟದ ಕಥೆ ಇದರಲ್ಲಿದೆ. ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಇಂತಹ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕ ಅದರ ಉದ್ದೇಶವನ್ನು ಈಡೇರಿಸಬೇಕು’ ಎಂದು ಲಾಡ್ ಹೇಳಿದರು.</p>.<p>ಶಿವಪುತ್ರಪ್ಪ ಆಶಿ ಬಂಡವಾಳ ಹೂಡಿದ್ದಾರೆ. ಐಶ್ವರ್ಯ ನಾಗರಾಜ್, ಸನತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಘ್ನೇಶ್ ಮಲಚಮಿ ಛಾಯಾಚಿತ್ರಗ್ರಹಣ, ಸತ್ಯಜಿತ್ ಸಂಕಲನ, ಬಹುರೂಪಿ ಹಿನ್ನೆಲೆ ಸಂಗೀತವಿದೆ. ಫೆಬ್ರುವರಿಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>