ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಪ್ರಸನ್ನ, ‘ಇಲ್ಲಿ ಆರು ವರ್ಷಗಳ ಹಿಂದೆ ಡಾ.ರಾಜ್ ಕುಮಾರ್ ಆಕೃತಿ ಹೋಲುವ ರೈತ ಕುಟುಂಬದ ದೃಶ್ಯಾವಳಿಯೊಂದನ್ನು ರಚಿಸಲಾಗಿತ್ತು. ದೃಶ್ಯಾವಳಿಯಲ್ಲಿ ಜೋಡೆತ್ತಿನ ಬಂಡಿಯನ್ನು ಡಾ.ರಾಜ್ ಕುಮಾರ್ ಓಡಿಸುವ, ಜತೆಯಲ್ಲಿ ಸಾಕು ನಾಯಿ, ಮತ್ತೊಂದು ಬದಿಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ತಾಯಿ ಹಸುವಿನ ಚಿತ್ರಗಳಿದ್ದವು. ಬಿಸಿಲು–ಮಳೆ–ಗಾಳಿಗೆ ಸಿಲುಕಿ ಬಂಡಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಾಜ್ ಮೂರ್ತಿಯಲ್ಲಿನ ಕೈ ಮತ್ತು ಕಾಲುಗಳಲ್ಲಿನ ಬೆರಳುಗಳು ತುಂಡಾಗಿದ್ದವು. ಎತ್ತಿನ ಗಾಡಿ ತುಂಬ ಶಿಥಿಲವಾಗಿದ್ದ ಕಾರಣ ಮುರಿದು ಬಿದ್ದರೆ ಡಾ.ರಾಜ್ ಪ್ರತಿಮೆ ಹಾಳಾಗುವ ಸಾಧ್ಯತೆ ಇತ್ತು. ಇಡೀ ದೃಶ್ಯಾವಳಿಯನ್ನು ಚಿತ್ರದುರ್ಗದ ಮುರುಘಾ ವನದ ಕಲಾವಿದ ಸಂಗಮೇಶ್ ಅವರಿಂದ ಪುನರ್ ನಿರ್ಮಿಸಲಾಯಿತು’ ಎಂದು ವಿವರಿಸಿದರು.