<p><strong>ಬೆಂಗಳೂರು</strong>: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರಗಳ ತಯಾರಿಕೆಯ ಆಧುನಿಕ ತಂತ್ರಜ್ಞಾನಗಳ ವಿನಿಮಯಕ್ಕಾಗಿ ವೇದಿಕೆ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಲನಚಿತ್ರ ನಿರ್ಮಿಸಿದ ಹೆಸರಾಂತ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಆಹ್ವಾನಿಸಲಾಗುವುದು. ಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದೆ ಎಂದು ಹೇಳಿದರು.</p>.<p>‘ಚಲನಚಿತ್ರಗಳ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. 2–3 ದಿನಗಳಲ್ಲಿ ಪ್ರಶಸ್ತಿಯ ಮೊತ್ತವನ್ನು ನಿಗದಿ ಮಾಡಲಾಗುವುದು. ಈಗ ₹1 ಲಕ್ಷದಿಂದ ₹3 ಲಕ್ಷದವರೆಗೆ ಬಹುಮಾನಗಳ ಮೊತ್ತವಿದೆ. ಅದನ್ನು ₹5 ಲಕ್ಷದಿಂದ ₹10 ಲಕ್ಷಗಳಿಗೆ ಹೆಚ್ಚಿಸುವ ಉದ್ದೇಶವಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಒಳ್ಳೆಯ ಮೊತ್ತವನ್ನೇ ನಿಗದಿ ಮಾಡುತ್ತೇವೆ’ ಎಂದು ಅಶೋಕ ವಿವರಿಸಿದರು.</p>.<p>‘ಜ್ಯೂರಿಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗುವುದು. ಒಳ್ಳೆಯ ರೀತಿಯಲ್ಲಿ ಆಯ್ಕೆ ಮಾಡಬೇಕು, ವಿವಾದಕ್ಕೆ ಕಾರಣ<br />ವಾಗಬಾರದು ಎಂದು ಸೂಚಿಸಿದ್ದೇನೆ. ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳಿಗೂ ಆದ್ಯತೆ ನೀಡಬೇಕು. ಈ ಬಾರಿಯ ಚಿತ್ರೋತ್ಸವಕ್ಕೆ ₹4.49 ಕೋಟಿ ನೀಡಲಾಗುವುದು’ ಎಂದರು.</p>.<p>* ಮಾ.23 ರ ಸಂಜೆ 6 ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಚಿತ್ರೋತ್ಸವದ ಉದ್ಘಾಟನೆ.</p>.<p>*ಮಾ.30 ರಂದು ರಾಜ್ಯಪಾಲರಿಂದ ಸಮಾರೋಪ ಭಾಷಣ ಮತ್ತು ಪ್ರಶಸ್ತಿ ವಿತರಣೆ. ನೆರೆ ರಾಜ್ಯಗಳ ಚಿತ್ರರಂಗದ ಗಣ್ಯರಿಗೆ ಆಹ್ವಾನ.</p>.<p>*ಒರಾಯನ್ ಮಾಲ್ನ 11 ಪರದೆಗಳಲ್ಲಿ ಚಿತ್ರಗಳ ಪ್ರದರ್ಶನ.</p>.<p>*300 ಸಿನಿಮಾಗಳ ಪ್ರದರ್ಶನ</p>.<p>*50 ಕ್ಕೂ ದೇಶಗಳ ಚಿತ್ರಗಳ ಪ್ರದರ್ಶನ</p>.<p><br />–––––––––––––––</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರಗಳ ತಯಾರಿಕೆಯ ಆಧುನಿಕ ತಂತ್ರಜ್ಞಾನಗಳ ವಿನಿಮಯಕ್ಕಾಗಿ ವೇದಿಕೆ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.</p>.<p>ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಲನಚಿತ್ರ ನಿರ್ಮಿಸಿದ ಹೆಸರಾಂತ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಆಹ್ವಾನಿಸಲಾಗುವುದು. ಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದೆ ಎಂದು ಹೇಳಿದರು.</p>.<p>‘ಚಲನಚಿತ್ರಗಳ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. 2–3 ದಿನಗಳಲ್ಲಿ ಪ್ರಶಸ್ತಿಯ ಮೊತ್ತವನ್ನು ನಿಗದಿ ಮಾಡಲಾಗುವುದು. ಈಗ ₹1 ಲಕ್ಷದಿಂದ ₹3 ಲಕ್ಷದವರೆಗೆ ಬಹುಮಾನಗಳ ಮೊತ್ತವಿದೆ. ಅದನ್ನು ₹5 ಲಕ್ಷದಿಂದ ₹10 ಲಕ್ಷಗಳಿಗೆ ಹೆಚ್ಚಿಸುವ ಉದ್ದೇಶವಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಒಳ್ಳೆಯ ಮೊತ್ತವನ್ನೇ ನಿಗದಿ ಮಾಡುತ್ತೇವೆ’ ಎಂದು ಅಶೋಕ ವಿವರಿಸಿದರು.</p>.<p>‘ಜ್ಯೂರಿಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗುವುದು. ಒಳ್ಳೆಯ ರೀತಿಯಲ್ಲಿ ಆಯ್ಕೆ ಮಾಡಬೇಕು, ವಿವಾದಕ್ಕೆ ಕಾರಣ<br />ವಾಗಬಾರದು ಎಂದು ಸೂಚಿಸಿದ್ದೇನೆ. ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳಿಗೂ ಆದ್ಯತೆ ನೀಡಬೇಕು. ಈ ಬಾರಿಯ ಚಿತ್ರೋತ್ಸವಕ್ಕೆ ₹4.49 ಕೋಟಿ ನೀಡಲಾಗುವುದು’ ಎಂದರು.</p>.<p>* ಮಾ.23 ರ ಸಂಜೆ 6 ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಚಿತ್ರೋತ್ಸವದ ಉದ್ಘಾಟನೆ.</p>.<p>*ಮಾ.30 ರಂದು ರಾಜ್ಯಪಾಲರಿಂದ ಸಮಾರೋಪ ಭಾಷಣ ಮತ್ತು ಪ್ರಶಸ್ತಿ ವಿತರಣೆ. ನೆರೆ ರಾಜ್ಯಗಳ ಚಿತ್ರರಂಗದ ಗಣ್ಯರಿಗೆ ಆಹ್ವಾನ.</p>.<p>*ಒರಾಯನ್ ಮಾಲ್ನ 11 ಪರದೆಗಳಲ್ಲಿ ಚಿತ್ರಗಳ ಪ್ರದರ್ಶನ.</p>.<p>*300 ಸಿನಿಮಾಗಳ ಪ್ರದರ್ಶನ</p>.<p>*50 ಕ್ಕೂ ದೇಶಗಳ ಚಿತ್ರಗಳ ಪ್ರದರ್ಶನ</p>.<p><br />–––––––––––––––</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>