ಈ ಚಿತ್ರದಲ್ಲಿ ನವರಸಗಳು ಇರಲಿವೆ. ಭರಮಣ್ಣ ಹಾಗೂ ಮುದ್ದಣ್ಣನ ಮುಖಾಮುಖಿ ಕೂಡ ಇದರಲ್ಲಿ ಇರಲಿದೆ ಎಂದು ವೇಣು ಅವರು ಈ ಹಿಂದೆ ಒಮ್ಮೆ ತಿಳಿಸಿದ್ದರು. ‘ಇತಿಹಾಸ, ಸಾಹಿತ್ಯ ಹಾಗೂ ಸಿನಿಮಾ ಒಂದೇ ಅಲ್ಲ. ಹಾಗಾಗಿ, ಭರಮಣ್ಣನ ಕಥೆಯನ್ನು ಸಿನಿಮಾ ರೂಪದಲ್ಲಿ ಹೇಳುವಾಗ ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿಕೊಳ್ಳಲಾಗುತ್ತದೆ’ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.