<p><strong>ಬೆಂಗಳೂರು</strong>: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು.</p><p>ಇದೇ ವೇಳೆ ನಟಿ, ಉತ್ತರಪ್ರದೇಶದ ಪಾರಮಾರ್ಥ ನಿಕೇತನ್ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.</p><p>ಬಳಿಕ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ‘ನಾನು ಇಲ್ಲಿಗೆ ಬಂದಿರುವುದು ನಿಜವಾಗಲೂ ನನ್ನ ಅದೃಷ್ಟ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಇದೇ ವೇಳೆ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ’ ಎಂದರು.</p><p>‘ಕುಂಭಮೇಳದ ಅಗಾದವಾದ ಶಕ್ತಿ, ವೈಶಿಷ್ಠ್ಯ, ಸೌಂದರ್ಯವನ್ನು ನಾನು ಕಂಡುಕೊಂಡೆ. ಪೂರ್ಣ ದಿನ ಇಲ್ಲಿಯೇ ಇರಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.</p><p>ಕತ್ರಿನಾ ಕೈಫ್ ಪತಿ, ನಟ ವಿಕ್ಕಿ ಕೌಶಲ್ ಅವರು ಕೆಲವು ದಿನಗಳ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿ ತೆರಳಿದ್ದರು.</p><p>ಕತ್ರಿನಾ ಚಿತ್ರರಂಗದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕಾರಣ ಅವರ ಬಳಿ ಐದು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಜೀ ಲೇ ಜಾರಾ ಸಿನಿಮಾ ಬಿಟ್ಟರೇ ಯಾವುದೇ ಸಿನಿಮಾಗಳಿಲ್ಲ. ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.</p><p>2024 ರಲ್ಲಿ ಕತ್ರಿನಾ ವಿಜಯ್ ಸೇತುಪತಿ ಜೊತೆ ನಟಿಸಿದ್ದ ಮೇರಿ ಕ್ರಿಸ್ಮಸ್ ತೆರೆ ಕಂಡಿತ್ತು.</p>.ಕುಂಭಮೇಳದಲ್ಲಿ ತಮನ್ನಾ ಪುಣ್ಯಸ್ನಾನ: ನಟ ವಶಿಷ್ಠ ಸಾಥ್; ಒಡೆಲಾ–2 ಟೀಸರ್ ಬಿಡುಗಡೆ.ಮಹಾಕುಂಭ ಮೇಳದಲ್ಲಿ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಹಾಡಿ ಹೊಗಳಿದ ನಟ ಅಕ್ಷಯ್ ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು.</p><p>ಇದೇ ವೇಳೆ ನಟಿ, ಉತ್ತರಪ್ರದೇಶದ ಪಾರಮಾರ್ಥ ನಿಕೇತನ್ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.</p><p>ಬಳಿಕ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ‘ನಾನು ಇಲ್ಲಿಗೆ ಬಂದಿರುವುದು ನಿಜವಾಗಲೂ ನನ್ನ ಅದೃಷ್ಟ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಇದೇ ವೇಳೆ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ’ ಎಂದರು.</p><p>‘ಕುಂಭಮೇಳದ ಅಗಾದವಾದ ಶಕ್ತಿ, ವೈಶಿಷ್ಠ್ಯ, ಸೌಂದರ್ಯವನ್ನು ನಾನು ಕಂಡುಕೊಂಡೆ. ಪೂರ್ಣ ದಿನ ಇಲ್ಲಿಯೇ ಇರಲು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.</p><p>ಕತ್ರಿನಾ ಕೈಫ್ ಪತಿ, ನಟ ವಿಕ್ಕಿ ಕೌಶಲ್ ಅವರು ಕೆಲವು ದಿನಗಳ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿ ತೆರಳಿದ್ದರು.</p><p>ಕತ್ರಿನಾ ಚಿತ್ರರಂಗದಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕಾರಣ ಅವರ ಬಳಿ ಐದು ವರ್ಷಗಳ ಹಿಂದೆ ಘೋಷಣೆಯಾಗಿದ್ದ ಜೀ ಲೇ ಜಾರಾ ಸಿನಿಮಾ ಬಿಟ್ಟರೇ ಯಾವುದೇ ಸಿನಿಮಾಗಳಿಲ್ಲ. ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.</p><p>2024 ರಲ್ಲಿ ಕತ್ರಿನಾ ವಿಜಯ್ ಸೇತುಪತಿ ಜೊತೆ ನಟಿಸಿದ್ದ ಮೇರಿ ಕ್ರಿಸ್ಮಸ್ ತೆರೆ ಕಂಡಿತ್ತು.</p>.ಕುಂಭಮೇಳದಲ್ಲಿ ತಮನ್ನಾ ಪುಣ್ಯಸ್ನಾನ: ನಟ ವಶಿಷ್ಠ ಸಾಥ್; ಒಡೆಲಾ–2 ಟೀಸರ್ ಬಿಡುಗಡೆ.ಮಹಾಕುಂಭ ಮೇಳದಲ್ಲಿ ಕೈಗೊಂಡ ವ್ಯವಸ್ಥೆಗಳ ಬಗ್ಗೆ ಹಾಡಿ ಹೊಗಳಿದ ನಟ ಅಕ್ಷಯ್ ಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>