ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವ್ಯಕ್ತಿಗಳಿಗೆ ಜನತಾ ಕರ್ಫ್ಯೂ ಆಚರಿಸುವ ಸಂದರ್ಭದಲ್ಲಿ, ಜನ ತಮ್ಮ ಮನೆಯ ಬಾಲ್ಕನಿಯಿಂದ ಅಥವಾ ಕಿಟಕಿಯಿಂದ ಚಪ್ಪಾಳೆ ತಟ್ಟಿ ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದರು. ಆದರೆ, ಪ್ರಧಾನಿ ಮನವಿಗೆ ಅನುಸಾರವಾಗಿ ವರ್ತಿಸುವುದನ್ನು ಬಿಟ್ಟು, ಜನ ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಬಂದು ರ್ಯಾಲಿ ನಡೆಸಿದ ಪ್ರಕರಣ ಕೂಡ ಭಾನುವಾರ ವರದಿಯಾಗಿದೆ.