ಕನ್ನಡತಿ ಸೀರಿಯಲ್ ಜನಮೆಚ್ಚಿದ ನಾಯಕ ಕಿರಣ್ ರಾಜ್ ತಮ್ಮ ಅಭಿನಯ ಮತ್ತು ಲುಕ್ಸ್ನಿಂದ ತುಂಬಾ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಕಿರಣ್ ರಾಜ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆ ಪ್ರಶ್ನೆಗೆ ಕಿರಣ್ ರಾಜ್ ಸ್ಕೈ ಡೈವ್ ಮಾಡಿ ಉತ್ತರ ಕೊಟ್ಟಿದ್ದರು. ತಮ್ಮ ಹೊಸ ಚಿತ್ರ ರಾನಿ ಚಿತ್ರದ ಟೈಟಲ್ ಅನ್ನು ರಿಸ್ಕ್ ತೆಗೆದುಕೊಂಡು ಸ್ಕೈಡೈವ್ ಮಾಡಿ ರಿಲೀಸ್ ಮಾಡಿದ್ದರು. ಬಿಗ್ ಸ್ಕ್ರೀನ್ನಲ್ಲಿ ಬ್ರೇಕ್ಗೆ ಕಾಯುತ್ತಿರುವ ಕಿರಣ್ ರಾಜ್ ನಮ್ಮ ಜೊತೆ ಅವರ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.