‘ಆಚಾರ್ಯ’ ಸಿನಿಮಾದಲ್ಲಿ ಆಕೆ ನಟಿಸುವುದಿಲ್ಲ ಎಂಬ ಸುದ್ದಿ ಕೇಳಿ ನನಗೂ ಶಾಕ್ ಆಯಿತು. ಈ ಬಗ್ಗೆ ನನ್ನ ಚಿತ್ರತಂಡದೊಟ್ಟಿಗೆ ಚರ್ಚಿಸಿದೆ. ನನ್ನ ಮಗಳು ಸುಶ್ಮಿತಾ ಆಕೆಯೊಟ್ಟಿಗೆ ಮಾತನಾಡಲು ಸಿದ್ಧಳಿದ್ದಳು. ಮಣಿರತ್ನಂ ನಿರ್ದೇಶನದ ಬಿಗ್ಬಜೆಟ್ ಸಿನಿಮಾದಲ್ಲಿ ತ್ರಿಷಾ ನಟಿಸುತ್ತಿದ್ದಾರೆ. ಜೊತೆಗೆ, ಈಗಾಗಲೇ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸಮಯದ ಹೊಂದಾಣಿಕೆಯಿಂದ ಹಿಂದೆ ಸರಿದಿದ್ದಾರೆ. ಆಕೆ ಹೇಳಿದಂತೆ ಯಾವುದೇ ಸೃಜನಾತ್ಮಕ ವ್ಯತ್ಯಾಸವನ್ನು ನನ್ನ ತಂಡ ಸೃಷ್ಟಿಸಿಲ್ಲ’ ಎಂದು ಹೇಳಿದ್ದಾರೆ ಚಿರಂಜೀವಿ.