ಬೆಂಗಳೂರು: ನಗರದಲ್ಲಿ ಭಾನುವಾರ ನಿಧನರಾದ ಖ್ಯಾತ ಚಿತ್ರನಟ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ಸಿದ್ಧತೆಗಳು ಸೋದರಧ್ರುವ ಸರ್ಜಾ ಅವರ ತೋಟದಲ್ಲಿ ಆರಂಭವಾಗಿವೆ.
ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಬಸವನಗುಡಿಯ ನಿವಾಸದಲ್ಲಿ ಮಧ್ಯಾಹ್ನ ಒಂದು ಗಂಟೆಯವರೆಗೆ ಇಡಲಾಗುತ್ತದೆ. ಮೂರು ಗಂಟೆಯ ಹೊತ್ತಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ಇದೀಗ ತಿಳಿಸಿವೆ.
ಸಿನಿಮಾ ರಂಗದ ಹಿರಿಯರಾದ ದೊಡ್ಡಣ್ಣ, ನಿರ್ಮಾಪಕ ಕೆ. ಮಂಜು ಮತ್ತಿತರರು ಚಿರು ಅವರ ಪಾರ್ಥಿವ ಶರೀರದ ದರ್ಶನ ಪಡೆದರು.