ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣ ಚಿರು ನನ್ನ ಗುರು: ಚಾಲೆಂಜ್‌ ಸ್ವೀಕರಿಸಿದ ಧ್ರುವ ಉತ್ತರ

Last Updated 6 ಮಾರ್ಚ್ 2021, 12:27 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’...

ಹೀಗೆಂದು ಅಣ್ಣ ದಿವಂಗತ ಚಿರಂಜೀವಿ ಸರ್ಜಾ ಅವರನ್ನು ನೆನಪಿಸಿಕೊಂಡಿದ್ದು ನಟ ಧ್ರುವ ಸರ್ಜಾ. ‘ಯುವರತ್ನ’ ಚಿತ್ರದ ‘ಪಾಠಶಾಲಾ’ ಹಾಡು ಬಿಡುಗಡೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ #MyGuruChallege ಅಭಿಯಾನವನ್ನು ಚಿತ್ರತಂಡವು ಆರಂಭಿಸಿದ್ದು, ಮೊದಲಿಗೆ ಚಿತ್ರದ ನಾಯಕ ಪುನೀತ್‌ ರಾಜ್‌ಕುಮಾರ್‌ ಅವರೇ ತಮ್ಮ ಗುರು ವಿಜಯಲಕ್ಷ್ಮಿ ಎಂಬುವವರ ಜೊತೆಗಿದ್ದ ಫೋಟೊ ಅಪ್‌ಲೋಡ್‌ ಮಾಡಿದ್ದರು.

ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ದೇಶಕ ಕಾರ್ತಿಕ್‌ ಗೌಡ ಅವರ ಸವಾಲು ಸ್ವೀಕರಿಸಿರುವ ಧ್ರುವ ಸರ್ಜಾ ಕೂಡಾ, ಅಣ್ಣನೇ ನನ್ನ ಗುರು ಎಂದು ಚಿರು ಸರ್ಜಾ ಅವರ ಜೊತೆಗಿನ ಫೋಟೊ ಅಪ್‌ಲೋಡ್‌ ಮಾಡಿದ್ದಾರೆ. ಧ್ರುವ ಸರ್ಜಾ ಅವರು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರನ್ನು ನಾಮಿನೇಟ್‌ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಚಿರು ಅವರು ನಿಧನರಾದ ಕಾರಣ ಧ್ರುವ ಸರ್ಜಾ ಅವರೇ ಅಣ್ಣನಿಗೆ ಧ್ವನಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT