<p>‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ತುಷಾರ್ಗೌಡ ನಾಯಕನಾಗಿ ಮತ್ತು ‘ಮಜಾಭಾರತ’ ಖ್ಯಾತಿಯ ಆರಾಧನಾ ಭಟ್ ನಿಟ್ಟೋಡಿ ನಾಯಕಿಯಾಗಿ ಕಾಣಿಸಿಕೊಂಡಿರುವ ‘ಓ ಮೈ ಲವ್’ ವಿಡಿಯೊ ಆಲ್ಬಂ ಸಾಂಗ್ ಬಿಡುಗಡೆಗೆ ಸಿದ್ಧಗೊಂಡಿದೆ.</p>.<p>ಈ ಹಾಡಿನ ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನ ಹಲವು ಚಿತ್ರಗಳಿಗೆ ದುಡಿದಿರುವ ಜೀವನ್ ಗಂಗಾಧರಯ್ಯ ಅವರದು.</p>.<p>ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂಧಗಳು ವಹಿಸುತ್ತಿರುವ ಪಾತ್ರ, ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧದಲ್ಲಿನ ಸಿಹಿ, ಕಹಿ ಕ್ಷಣಗಳು, ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳನ್ನು ಈ ಹಾಡು ನೆನಪಿಸಲಿದೆ ಎನ್ನುತ್ತಾರೆ ಜೀವನ್ ಗಂಗಾಧರಯ್ಯ.</p>.<p>ಈ ಹಾಡನ್ನು ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಾ ಭಟ್, ‘ಬೆಲ್ಬಾಟಂ’ ಚಿತ್ರದ ನಿರ್ಮಾಪಕ ಸಂತೋಷ್ಕುಮಾರ್, ‘ಕೆಜಿಎಫ್’ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕ ತಿಮ್ಮೇಶ್ ಮುಂತಾದವರು ಮೆಚ್ಚಿ ಪ್ರಶಂಸಿಸಿದ್ದಾರೆ ಎನ್ನುತ್ತಾರೆ ಅವರು.</p>.<p>ಸಂಗೀತ ಜಿತಿನ್ ದರ್ಶನ್, ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್ ಅಂಚಲ್ಕರ್, ಸಂಕಲನ ಅಕ್ಷಯ್ ಪಿ.ರಾವ್, ನೃತ್ಯ ತೀಚು ಆಚಾರ್ಯ ಅವರದು. ಶಂಕರಣ್ಣ ಸ್ಟುಡಿಯೊ,ಪ್ರಭಾಕರ್ ಬಿ.ಪಿ. ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ತುಷಾರ್ಗೌಡ ನಾಯಕನಾಗಿ ಮತ್ತು ‘ಮಜಾಭಾರತ’ ಖ್ಯಾತಿಯ ಆರಾಧನಾ ಭಟ್ ನಿಟ್ಟೋಡಿ ನಾಯಕಿಯಾಗಿ ಕಾಣಿಸಿಕೊಂಡಿರುವ ‘ಓ ಮೈ ಲವ್’ ವಿಡಿಯೊ ಆಲ್ಬಂ ಸಾಂಗ್ ಬಿಡುಗಡೆಗೆ ಸಿದ್ಧಗೊಂಡಿದೆ.</p>.<p>ಈ ಹಾಡಿನ ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನ ಹಲವು ಚಿತ್ರಗಳಿಗೆ ದುಡಿದಿರುವ ಜೀವನ್ ಗಂಗಾಧರಯ್ಯ ಅವರದು.</p>.<p>ಆಧುನಿಕತೆಯ ಜೀವನದಲ್ಲಿ ಮಾನವ ಸಂಬಂಧಗಳು ವಹಿಸುತ್ತಿರುವ ಪಾತ್ರ, ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧದಲ್ಲಿನ ಸಿಹಿ, ಕಹಿ ಕ್ಷಣಗಳು, ಯೌವ್ವನದಲ್ಲಿ ಹೊಸತನ್ನು ಕಂಡುಕೊಳ್ಳುವ ಸಮಯದಲ್ಲಿ ಎದುರುಗೊಳ್ಳುವ ವಿವಿಧ ಸನ್ನಿವೇಶಗಳನ್ನು ಈ ಹಾಡು ನೆನಪಿಸಲಿದೆ ಎನ್ನುತ್ತಾರೆ ಜೀವನ್ ಗಂಗಾಧರಯ್ಯ.</p>.<p>ಈ ಹಾಡನ್ನು ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿರ್ದೇಶಕ ಪಿ.ಶೇಷಾದ್ರಿ, ಗಾಯಕಿ ಅನುರಾಧಾ ಭಟ್, ‘ಬೆಲ್ಬಾಟಂ’ ಚಿತ್ರದ ನಿರ್ಮಾಪಕ ಸಂತೋಷ್ಕುಮಾರ್, ‘ಕೆಜಿಎಫ್’ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ನಟಿ ಪ್ರಿಯಾಂಕ ತಿಮ್ಮೇಶ್ ಮುಂತಾದವರು ಮೆಚ್ಚಿ ಪ್ರಶಂಸಿಸಿದ್ದಾರೆ ಎನ್ನುತ್ತಾರೆ ಅವರು.</p>.<p>ಸಂಗೀತ ಜಿತಿನ್ ದರ್ಶನ್, ಸತ್ಯರಾಧಾಕೃಷ್ಣ, ಛಾಯಾಗ್ರಹಣ ರಾಜರಾವ್ ಅಂಚಲ್ಕರ್, ಸಂಕಲನ ಅಕ್ಷಯ್ ಪಿ.ರಾವ್, ನೃತ್ಯ ತೀಚು ಆಚಾರ್ಯ ಅವರದು. ಶಂಕರಣ್ಣ ಸ್ಟುಡಿಯೊ,ಪ್ರಭಾಕರ್ ಬಿ.ಪಿ. ಹಾಗೂ ರಂಗಮಯೂರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>