ಗ್ರಾಮೀಣ ಭಾಗದ ಪಡ್ಡೆ ಹುಡುಗನಿಗೆ ಮದುವೆ ಮಾಡಿದರೆ ಎಲ್ಲ ಸರಿ ಹೋಗುತ್ತದೆ ಎನ್ನುವ ಅಂಶ ಇಟ್ಟುಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾ ರಚನೆ ಮಾಡಲಾಗಿದೆ. ನಾಯಕ ನಟ ಬಾಗಲಕೋಟೆಯ ಶಿವಚಂದ್ರಕುಮಾರ್, ನಾಯಕಿಯಾಗಿ ಆರಾಧ್ಯ, ಹಿರಿಯ ಕಲಾವಿದರಾದ ರಮೇಶ ಭಟ್, ಅರುಣ ಬಾಲರಾಜ್, ಮಿಮಿಕ್ರಿ ಗೋಪಿ, ಚಿತ್ಕಳಾ ಬಿರಾದಾರ, ಸದಾನಂದ ಕಾಳಿ, ಕೃಷ್ಣ ಮೂರ್ತಿ ಕವಾತ್ತಾರ್, ಚಕ್ರವರ್ತಿ ಮುಂತಾದವರು ಅಭಿನಯಿಸಿದ್ದಾರೆ.