ಸಿಸಿಬಿಯ ಮೊದಲ ನೋಟಿಸ್ಗೆ ಉತ್ತರಿಸಿರುವ ರಾಗಿಣಿ, ‘ಸಮಯದ ಅಭಾವದಿಂದ ವಿಚಾರಣೆಗೆ ಬರಲು ಆಗುತ್ತಿಲ್ಲ. ನನ್ನ ಪರ ವಕೀಲರು ಕಚೇರಿಗೆ ಬರಲಿದ್ದಾರೆ. ನಾನು ಸೋಮವಾರ ವಿಚಾರಣೆಗೆ ಬರುತ್ತೇನೆ. ಕಾಲಾವಕಾಶ ನೀಡಿ’ ಎಂದಿದ್ದರು. ಅದಕ್ಕೆ ಒಪ್ಪದ ಪೊಲೀಸರು, ಶುಕ್ರವಾರ ಕಡ್ಡಾಯವಾಗಿ ವಿಚಾರಣೆಗೆ ಬರುವಂತೆ ವಕೀಲರ ಮೂಲಕ ಲಿಖಿತವಾಗಿಯೇ ಹೇಳಿ ಕಳುಹಿಸಿದ್ದಾರೆ.