<p><strong>ಹೈದರಾಬಾದ್:</strong> ಹಲವು ಹಿಟ್ ಸಿನಿಮಾಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಅವರ ಸ್ನೇಹಿತ ಎಂದು ಹೇಳಿಕೊಂಡಿರುವ ಶ್ರೀನಿವಾಸ ರಾವ್ ಎಂಬುವವರು ದೌರ್ಜನ್ಯ, ಹಿಂಸೆಯ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.</p><p>ಈ ಕುರಿತಂತೆ ಶ್ರೀನಿವಾಸ ರಾವ್ ವಿಡಿಯೊ ಮಾಡಿರುವುದನ್ನು ಹಲವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ</p><p>‘ನನ್ನ ಹಾಗೂ ರಾಜಮೌಳಿ ಸ್ನೇಹ 34 ವರ್ಷದ್ದು. 2007ರಲ್ಲಿ ತೆರೆಕಂಡ ‘ಯಮದೊಂಗ’ ಸಿನಿಮಾವರೆಗೂ ನಾವಿಬ್ಬರೂ ಜತೆಗೇ ಇದ್ದೆವು. ಒಬ್ಬ ಮಹಿಳೆಯತ್ತ ಇಬ್ಬರೂ ಆಕರ್ಷಿತರಾದೆವು. ಆದರೆ ಸ್ನೇಹಕ್ಕಾಗಿ ನಾನು ಹಿಂದೆ ಸರಿದೆ. ಹೀಗಾಗಿ 55 ವರ್ಷವಾದರೂ ನಾನು ಅವಿವಾಹಿತನಾಗಿಯೇ ಉಳಿದೆ’ ಎಂದಿದ್ದಾರೆ.</p><p>‘ಹಲವು ಹಿಟ್ ಸಿನಿಮಾಗಳ ನಂತರ ನನ್ನ ನಿಷ್ಠೆಯನ್ನು ರಾಜಮೌಳಿ ಪ್ರಶ್ನಿಸಲಾರಂಭಿಸಿದರು. ಆ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ. ಈ ವಯಸ್ಸಿನಲ್ಲಿ ನಾನು ಇಷ್ಟೊಂದು ದೌರ್ಜನ್ಯವನ್ನು ಸಹಿಸಲಾರೆ. ನನ್ನ ಮೇಲೆ ಸುಳ್ಳು ಪತ್ತೆ ಪರೀಕ್ಷೆಯನ್ನೂ ನಡೆಸಿದ್ದಾರೆ. ಚಿತ್ರರಂಗದ ಹಲವರ ವಿರುದ್ಧ ವಾಮಾಚಾರವನ್ನೂ ರಾಜಮೌಳಿ ಮಾಡಿಸಿದ್ದಾರೆ’ ಎಂದು ಶ್ರೀನಿವಾಸ ರಾವ್ ಆರೋಪಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.</p><p>‘ನನ್ನ ಈ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು. ನನಗೆ ಆತ್ಮಹತ್ಯೆ ಬಿಟ್ಟು ಬೇರೆ ಹಾದಿ ತೋಚುತ್ತಿಲ್ಲ’ ಎಂದಿದ್ದಾರೆ.</p><p>ರಾಜಮೌಳಿ ಅವರು ಸದ್ಯ ನಟ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಎಸ್ಎಸ್ಎಂಬಿ29 ಎಂಬ ಚಿತ್ರವನ್ನು ನಿರ್ದೇಶನ ಹೊಣೆ ಹೊತ್ತಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.</p><p>ಶ್ರೀನಿವಾಸ ರಾವ್ ಅವರ ಆರೋಪದ ಕುರಿತು ರಾಜಮೌಳಿ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಹಲವು ಹಿಟ್ ಸಿನಿಮಾಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಅವರ ಸ್ನೇಹಿತ ಎಂದು ಹೇಳಿಕೊಂಡಿರುವ ಶ್ರೀನಿವಾಸ ರಾವ್ ಎಂಬುವವರು ದೌರ್ಜನ್ಯ, ಹಿಂಸೆಯ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.</p><p>ಈ ಕುರಿತಂತೆ ಶ್ರೀನಿವಾಸ ರಾವ್ ವಿಡಿಯೊ ಮಾಡಿರುವುದನ್ನು ಹಲವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ</p><p>‘ನನ್ನ ಹಾಗೂ ರಾಜಮೌಳಿ ಸ್ನೇಹ 34 ವರ್ಷದ್ದು. 2007ರಲ್ಲಿ ತೆರೆಕಂಡ ‘ಯಮದೊಂಗ’ ಸಿನಿಮಾವರೆಗೂ ನಾವಿಬ್ಬರೂ ಜತೆಗೇ ಇದ್ದೆವು. ಒಬ್ಬ ಮಹಿಳೆಯತ್ತ ಇಬ್ಬರೂ ಆಕರ್ಷಿತರಾದೆವು. ಆದರೆ ಸ್ನೇಹಕ್ಕಾಗಿ ನಾನು ಹಿಂದೆ ಸರಿದೆ. ಹೀಗಾಗಿ 55 ವರ್ಷವಾದರೂ ನಾನು ಅವಿವಾಹಿತನಾಗಿಯೇ ಉಳಿದೆ’ ಎಂದಿದ್ದಾರೆ.</p><p>‘ಹಲವು ಹಿಟ್ ಸಿನಿಮಾಗಳ ನಂತರ ನನ್ನ ನಿಷ್ಠೆಯನ್ನು ರಾಜಮೌಳಿ ಪ್ರಶ್ನಿಸಲಾರಂಭಿಸಿದರು. ಆ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ. ಈ ವಯಸ್ಸಿನಲ್ಲಿ ನಾನು ಇಷ್ಟೊಂದು ದೌರ್ಜನ್ಯವನ್ನು ಸಹಿಸಲಾರೆ. ನನ್ನ ಮೇಲೆ ಸುಳ್ಳು ಪತ್ತೆ ಪರೀಕ್ಷೆಯನ್ನೂ ನಡೆಸಿದ್ದಾರೆ. ಚಿತ್ರರಂಗದ ಹಲವರ ವಿರುದ್ಧ ವಾಮಾಚಾರವನ್ನೂ ರಾಜಮೌಳಿ ಮಾಡಿಸಿದ್ದಾರೆ’ ಎಂದು ಶ್ರೀನಿವಾಸ ರಾವ್ ಆರೋಪಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.</p><p>‘ನನ್ನ ಈ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು. ನನಗೆ ಆತ್ಮಹತ್ಯೆ ಬಿಟ್ಟು ಬೇರೆ ಹಾದಿ ತೋಚುತ್ತಿಲ್ಲ’ ಎಂದಿದ್ದಾರೆ.</p><p>ರಾಜಮೌಳಿ ಅವರು ಸದ್ಯ ನಟ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಎಸ್ಎಸ್ಎಂಬಿ29 ಎಂಬ ಚಿತ್ರವನ್ನು ನಿರ್ದೇಶನ ಹೊಣೆ ಹೊತ್ತಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.</p><p>ಶ್ರೀನಿವಾಸ ರಾವ್ ಅವರ ಆರೋಪದ ಕುರಿತು ರಾಜಮೌಳಿ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>