<p><strong>ಮುಂಬೈ:</strong> ಬಾಲಿವುಡ್ನ ಜನಪ್ರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್, ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿರುವ ‘ಎಮರ್ಜೆನ್ಸಿ’ ಚಿತ್ರ ತಂಡ ಸೇರಿದ್ದಾರೆ.<br />‘ಮಿಸ್ಟರ್ ಇಂಡಿಯಾ, ದೀವಾನ ಮಸ್ತಾನ’ ಮೊದಲಾದ ಚಿತ್ರಗಳಿಂದ ಜನಪ್ರಿಯರಾದವರು ಸತೀಶ್. ಸಲ್ಮಾನ್ ಖಾನ್ ಅಭಿನಯದ ‘ತೆರೆ ನಾಮ್‘ ಚಿತ್ರಕ್ಕೆ ಆಕ್ಷನ್–ಕಟ್ ಹೇಳಿದ್ದರು. ಸತೀಶ್ ಈ ಚಿತ್ರದಲ್ಲಿ ಸ್ವಾತಂತ್ರ ಹೋರಾಟಗಾರ ಹಾಗೂ ಮಾಜಿ ಉಪಪ್ರಧಾನಿ ಜಗ್ಜೀವನ ರಾಮ್ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.<br />ಭಾರತದ ತುರ್ತು ಪರಿಸ್ಥಿತಿ ಮತ್ತು ಅದರ ಸುತ್ತಲಿನ ರಾಜಕೀಯದ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕಂಗನಾ ಬರೆದು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರ ಮಾಡಲಿದ್ದಾರೆ.</p>.<p>ಒಂದು ಐತಿಹಾಸಿಕ ಅಥವಾ ರಾಜಕೀಯ ವ್ಯಕ್ತಿತ್ವದ ಪಾತ್ರ ಮಾಡುವಾಗ ಅವರ ಬಗ್ಗೆ ಅಧ್ಯಯನ ಅಗತ್ಯ. ಬಾಬು ಜಗನ್ಜೀವನ ರಾಮ್ ಅವರ ಪಾತ್ರ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕೌಶಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>.<p>ದಲಿತ ನೇತಾರ ಜಗಜೀವನ ರಾಮ್ ಹಿಂದುಳಿದವರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು. ಅವರ ಜನ್ಮ ದಿನವನ್ನು ಸಮತಾ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಅವರು 35 ವರ್ಷಗಳ ಕಾಲ ಕ್ಯಾಬಿನೆಟ್ ಸಚಿವರಾಗಿದ್ದರು.</p>.<p>ಈ ಪಾತ್ರಕ್ಕೆ ಕೌಶಿಕ್ ಸೂಕ್ತ ಆಯ್ಕೆ ಎಂದು ರನೌತ್ ಹೇಳಿದ್ದಾರೆ. ‘ಜಗಜೀವನ ರಾಮ್ಅವರ ಬಲ, ಬುದ್ಧಿವಂತಿಕೆ, ವ್ಯಂಗ್ಯವನ್ನು ತೆರೆಯ ಮೇಲೆ ತರಬಲ್ಲ ಸೂಕ್ತ ನಟರು ಬೇಕಿತ್ತು. ಹೀಗಾಗಿ ಸತೀಶ್ ಅವರು ಈ ಪಾತ್ರಕ್ಕೆ ಸೂಕ್ತ ಆಯ್ಕೆ. ಅವರ ಜೊತೆ ಅಭಿನಯಿಸಲು ಉತ್ಸುಕವಾಗಿರುವೆ’ ಎಂದು ರನೌತ್ ಹೇಳಿದ್ದಾರೆ.</p>.<p>ಎರ್ಮಜೆನ್ಸಿಯಲ್ಲಿ ಅನುಪಮ್ ಖೇರ್, ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ಮಾಡುತ್ತಿದ್ದಾರೆ. ಶ್ರೇಯಸ್ ತಾಲ್ಪಡೆ ಮಾಜಿ ಪ್ರಧಾನಿ ವಾಜಪೇಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಬಾಲಿವುಡ್ನ ಜನಪ್ರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್, ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿರುವ ‘ಎಮರ್ಜೆನ್ಸಿ’ ಚಿತ್ರ ತಂಡ ಸೇರಿದ್ದಾರೆ.<br />‘ಮಿಸ್ಟರ್ ಇಂಡಿಯಾ, ದೀವಾನ ಮಸ್ತಾನ’ ಮೊದಲಾದ ಚಿತ್ರಗಳಿಂದ ಜನಪ್ರಿಯರಾದವರು ಸತೀಶ್. ಸಲ್ಮಾನ್ ಖಾನ್ ಅಭಿನಯದ ‘ತೆರೆ ನಾಮ್‘ ಚಿತ್ರಕ್ಕೆ ಆಕ್ಷನ್–ಕಟ್ ಹೇಳಿದ್ದರು. ಸತೀಶ್ ಈ ಚಿತ್ರದಲ್ಲಿ ಸ್ವಾತಂತ್ರ ಹೋರಾಟಗಾರ ಹಾಗೂ ಮಾಜಿ ಉಪಪ್ರಧಾನಿ ಜಗ್ಜೀವನ ರಾಮ್ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.<br />ಭಾರತದ ತುರ್ತು ಪರಿಸ್ಥಿತಿ ಮತ್ತು ಅದರ ಸುತ್ತಲಿನ ರಾಜಕೀಯದ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕಂಗನಾ ಬರೆದು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರ ಮಾಡಲಿದ್ದಾರೆ.</p>.<p>ಒಂದು ಐತಿಹಾಸಿಕ ಅಥವಾ ರಾಜಕೀಯ ವ್ಯಕ್ತಿತ್ವದ ಪಾತ್ರ ಮಾಡುವಾಗ ಅವರ ಬಗ್ಗೆ ಅಧ್ಯಯನ ಅಗತ್ಯ. ಬಾಬು ಜಗನ್ಜೀವನ ರಾಮ್ ಅವರ ಪಾತ್ರ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕೌಶಿಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>.<p>ದಲಿತ ನೇತಾರ ಜಗಜೀವನ ರಾಮ್ ಹಿಂದುಳಿದವರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು. ಅವರ ಜನ್ಮ ದಿನವನ್ನು ಸಮತಾ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಅವರು 35 ವರ್ಷಗಳ ಕಾಲ ಕ್ಯಾಬಿನೆಟ್ ಸಚಿವರಾಗಿದ್ದರು.</p>.<p>ಈ ಪಾತ್ರಕ್ಕೆ ಕೌಶಿಕ್ ಸೂಕ್ತ ಆಯ್ಕೆ ಎಂದು ರನೌತ್ ಹೇಳಿದ್ದಾರೆ. ‘ಜಗಜೀವನ ರಾಮ್ಅವರ ಬಲ, ಬುದ್ಧಿವಂತಿಕೆ, ವ್ಯಂಗ್ಯವನ್ನು ತೆರೆಯ ಮೇಲೆ ತರಬಲ್ಲ ಸೂಕ್ತ ನಟರು ಬೇಕಿತ್ತು. ಹೀಗಾಗಿ ಸತೀಶ್ ಅವರು ಈ ಪಾತ್ರಕ್ಕೆ ಸೂಕ್ತ ಆಯ್ಕೆ. ಅವರ ಜೊತೆ ಅಭಿನಯಿಸಲು ಉತ್ಸುಕವಾಗಿರುವೆ’ ಎಂದು ರನೌತ್ ಹೇಳಿದ್ದಾರೆ.</p>.<p>ಎರ್ಮಜೆನ್ಸಿಯಲ್ಲಿ ಅನುಪಮ್ ಖೇರ್, ಜಯಪ್ರಕಾಶ್ ನಾರಾಯಣ್ ಅವರ ಪಾತ್ರ ಮಾಡುತ್ತಿದ್ದಾರೆ. ಶ್ರೇಯಸ್ ತಾಲ್ಪಡೆ ಮಾಜಿ ಪ್ರಧಾನಿ ವಾಜಪೇಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>