<p>ಸಾಮಾಜಿಕ ಜಾಗೃತಿ ಮೂಡಿಸುವ ಚಿಕ್ಕಪುಟ್ಟ ವಿಡಿಯೊಗಳು, ಹಾಡುಗಳ ನಿರ್ಮಾಣಕ್ಕೆ ಸೀಮಿತ ಆಗಿದ್ದ ‘ಸಂತತ’ ಎಂಬ ಸಮಾನ ಮನಸ್ಕರ ಬಳಗ ಈಗ ‘ಸ್ವಲ್ಪ ದೊಡ್ಡಮಟ್ಟದಲ್ಲಿ ಏನಾದರೂ ಮಾಡಬೇಕು’ ಎಂದು ಒಂದು ಹೆಜ್ಜೆ ಮುಂದಿಟ್ಟಿದೆ. ಅದರ ಫಲವಾಗಿ ‘ಎಂದೆಂದಿಗೂ’ ಕಿರುಚಿತ್ರ ನಿರ್ಮಾಣ ಆಗಿದೆ.</p>.<p>ಲಾಕ್ಡೌನ್ ತೆರವಿನ ನಂತರ ಆರಂಭವಾದ ‘ಎಂದೆಂದಿಗೂ’ ಕಿರುಚಿತ್ರದ ಕೆಲಸ ಈಗ ಕೊನೆಯ ಹಂತದಲ್ಲಿದೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಪ್ರೇಮ್ ಡಿ.1ರಂದು ಬಿಡುಗಡೆ ಮಾಡಿದ್ದಾರೆ.</p>.<p>‘ನಲವತ್ತೈದು ನಿಮಿಷಗಳ ಕಿರುಚಿತ್ರವಾದರೂ ನಾಲ್ಕು ಹಾಡುಗಳು ಬರುತ್ತವೆ. ಇದೊಂದು ಸಂಗೀತಮಯ ಕಿರುಚಿತ್ರ. ಪ್ರೇಮ್ ಅವರು ನಮ್ಮ ಹಾಡುಗಳನ್ನು ನೋಡಿ ತುಂಬಾ ಖುಷಿಯಾಗಿ ಹಾರೈಸಿದ್ದಾರೆ’ ಎಂದು ಪ್ರಯತ್ನಕ್ಕೆ ಸಿಕ್ಕ ಮೊದಲ ಮೆಚ್ಚುಗೆಯನ್ನು ಸಂಭ್ರಮಿಸುತ್ತಾರೆ ನಿರ್ದೇಶಕ ನಾಗರಾಜ ಪಾಟೀಲ.</p>.<p>ಚಿತ್ರಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿರುವ ನಾಗರಾಜ, ಭವಿಷ್ಯಕ್ಕೆ ಇದೊಂದು ಬಂಡವಾಳ ಎಂಬ ನಂಬಿಕೆಯಲ್ಲಿ ಇದ್ದಾರೆ. ಈ ಕಿರುಚಿತ್ರ ನೋಡಿ ಮುಂದೆ ಖಂಡಿತ ಸಿನಿಮಾ ನಿರ್ದೇಶನಕ್ಕೆ ಗಾಂಧಿನಗರದಿಂದ ಕರೆ ಬರುತ್ತದೆ ಎಂಬ ನಿರೀಕ್ಷೆ ಅವರದ್ದು.</p>.<p>ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪಡೆದ ನಾಗರಾಜ ಬದುಕು ಕಂಡುಕೊಂಡಿದ್ದು ಕಲಾಲೋಕದಲ್ಲಿ. ಹತ್ತು ವರ್ಷ ರಂಗಾಯಣದಲ್ಲಿ, ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಹತ್ತಿರ ಕೈ ಪಳಗಿಸಿಕೊಂಡಿದ್ದಾರೆ.</p>.<p>ಒಂದೆರಡು ದಿನಗಳಲ್ಲಿ ಹಾಡುಗಳನ್ನೂ ಬಿಡುಗಡೆ ಮಾಡುವ ಉತ್ಸಾಹದಲ್ಲಿ ತಂಡವಿದೆ. ಝನ್ಕಾರ್ ಆಡಿಯೊದವರ ಜೊತೆಗೆ ಹಾಡುಗಳ ಹಕ್ಕುಗಳನ್ನು ಹಂಚಿಕೊಳ್ಳುವ ಮಾತುಕತೆ ನಡೆದಿದೆ. ಕಿರುಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವ ಪ್ರಯತ್ನವೂ ನಡೆದಿದೆ.</p>.<p>ಐದು ಜನರ ‘ಸಂತತ’ ತಂಡವು ಐದು ವರ್ಷಗಳಲ್ಲಿ ಚುನಾವಣಾ ಜಾಗೃತಿ, ಕೊರೊನಾ ಜಾಗೃತಿ ಹಾಗೂ ಎಂಟ್ಹತ್ತು ಹಾಡುಗಳ ವಿಡಿಯೊಗಳನ್ನು ಹೊರತಂದಿದೆ.</p>.<p>ಕೊರೊನಾ ಸವಾಲು: ಕೊರೊನಾ ಕಾಲದಲ್ಲಿ ಕಿರುಚಿತ್ರ ನಿರ್ಮಾಣವು ನಾಗರಾಜ ಅವರಿಗೆ ಸುಲಭದ ಮಾತಾಗಿರಲಿಲ್ಲ. ಚಿತ್ರೀಕರಣ ಸ್ಥಳದಲ್ಲಿ ಸ್ಯಾನಿಟೈಸ್ ಮಾಡುವುದು, ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಜೊತೆಗೆ ಚಿತ್ರೀಕರಣಕ್ಕೆ ಪರವಾನಗಿ ಪಡೆಯುವುದೂ ಸವಾಲೇ ಆಗಿತ್ತು.</p>.<p><strong>ಹುಬ್ಬಳ್ಳಿ–ಧಾರವಾಡ ಮಂದಿ...</strong><br />‘ಸಂತತ’ ತಂಡದ ಸದಸ್ಯರೆಲ್ಲ ಧಾರವಾಡ ಜಿಲ್ಲೆಯವರು. ತಾರಾಗಣದಲ್ಲಿ ಇರುವವರು ಹಾಗೂ ಸಂಗೀತ (ಪ್ರಸನ್ನ ಭೋಜಶೆಟ್ಟರ್), ಛಾಯಾಗ್ರಹಣ (ಆಸೀಫ್ ನದಾಫ್), ಸಂಕಲನ (ಉದಯ್ ಹಬೀಬ್) ಹೀಗೆ ಕಿರುಚಿತ್ರದ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಬಹುತೇಕರು ಹುಬ್ಬಳ್ಳಿ–ಧಾರವಾಡದವರು.</p>.<p>ನಾಯಕ–ನಾಯಕಿ ಪಾತ್ರದಲ್ಲಿರುವ ಯು.ಜೆ. ವಿನಯ್ ಹಾಗೂ ಐಶ್ವರ್ಯಾ ಸಾಲಿಮಠ ಇಬ್ಬರೂ ಮಹಾಸತಿ, ಕನ್ನಡತಿ, ಸೇವಂತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.</p>.<p>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ರಂಗಾಯಣದ ಆವರಣ ಹೀಗೆ ಧಾರವಾಡದಲ್ಲೇ ಸಂಪೂರ್ಣ ಚಿತ್ರೀಕರಣ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾಜಿಕ ಜಾಗೃತಿ ಮೂಡಿಸುವ ಚಿಕ್ಕಪುಟ್ಟ ವಿಡಿಯೊಗಳು, ಹಾಡುಗಳ ನಿರ್ಮಾಣಕ್ಕೆ ಸೀಮಿತ ಆಗಿದ್ದ ‘ಸಂತತ’ ಎಂಬ ಸಮಾನ ಮನಸ್ಕರ ಬಳಗ ಈಗ ‘ಸ್ವಲ್ಪ ದೊಡ್ಡಮಟ್ಟದಲ್ಲಿ ಏನಾದರೂ ಮಾಡಬೇಕು’ ಎಂದು ಒಂದು ಹೆಜ್ಜೆ ಮುಂದಿಟ್ಟಿದೆ. ಅದರ ಫಲವಾಗಿ ‘ಎಂದೆಂದಿಗೂ’ ಕಿರುಚಿತ್ರ ನಿರ್ಮಾಣ ಆಗಿದೆ.</p>.<p>ಲಾಕ್ಡೌನ್ ತೆರವಿನ ನಂತರ ಆರಂಭವಾದ ‘ಎಂದೆಂದಿಗೂ’ ಕಿರುಚಿತ್ರದ ಕೆಲಸ ಈಗ ಕೊನೆಯ ಹಂತದಲ್ಲಿದೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಪ್ರೇಮ್ ಡಿ.1ರಂದು ಬಿಡುಗಡೆ ಮಾಡಿದ್ದಾರೆ.</p>.<p>‘ನಲವತ್ತೈದು ನಿಮಿಷಗಳ ಕಿರುಚಿತ್ರವಾದರೂ ನಾಲ್ಕು ಹಾಡುಗಳು ಬರುತ್ತವೆ. ಇದೊಂದು ಸಂಗೀತಮಯ ಕಿರುಚಿತ್ರ. ಪ್ರೇಮ್ ಅವರು ನಮ್ಮ ಹಾಡುಗಳನ್ನು ನೋಡಿ ತುಂಬಾ ಖುಷಿಯಾಗಿ ಹಾರೈಸಿದ್ದಾರೆ’ ಎಂದು ಪ್ರಯತ್ನಕ್ಕೆ ಸಿಕ್ಕ ಮೊದಲ ಮೆಚ್ಚುಗೆಯನ್ನು ಸಂಭ್ರಮಿಸುತ್ತಾರೆ ನಿರ್ದೇಶಕ ನಾಗರಾಜ ಪಾಟೀಲ.</p>.<p>ಚಿತ್ರಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿರುವ ನಾಗರಾಜ, ಭವಿಷ್ಯಕ್ಕೆ ಇದೊಂದು ಬಂಡವಾಳ ಎಂಬ ನಂಬಿಕೆಯಲ್ಲಿ ಇದ್ದಾರೆ. ಈ ಕಿರುಚಿತ್ರ ನೋಡಿ ಮುಂದೆ ಖಂಡಿತ ಸಿನಿಮಾ ನಿರ್ದೇಶನಕ್ಕೆ ಗಾಂಧಿನಗರದಿಂದ ಕರೆ ಬರುತ್ತದೆ ಎಂಬ ನಿರೀಕ್ಷೆ ಅವರದ್ದು.</p>.<p>ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪಡೆದ ನಾಗರಾಜ ಬದುಕು ಕಂಡುಕೊಂಡಿದ್ದು ಕಲಾಲೋಕದಲ್ಲಿ. ಹತ್ತು ವರ್ಷ ರಂಗಾಯಣದಲ್ಲಿ, ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ಹತ್ತಿರ ಕೈ ಪಳಗಿಸಿಕೊಂಡಿದ್ದಾರೆ.</p>.<p>ಒಂದೆರಡು ದಿನಗಳಲ್ಲಿ ಹಾಡುಗಳನ್ನೂ ಬಿಡುಗಡೆ ಮಾಡುವ ಉತ್ಸಾಹದಲ್ಲಿ ತಂಡವಿದೆ. ಝನ್ಕಾರ್ ಆಡಿಯೊದವರ ಜೊತೆಗೆ ಹಾಡುಗಳ ಹಕ್ಕುಗಳನ್ನು ಹಂಚಿಕೊಳ್ಳುವ ಮಾತುಕತೆ ನಡೆದಿದೆ. ಕಿರುಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡುವ ಪ್ರಯತ್ನವೂ ನಡೆದಿದೆ.</p>.<p>ಐದು ಜನರ ‘ಸಂತತ’ ತಂಡವು ಐದು ವರ್ಷಗಳಲ್ಲಿ ಚುನಾವಣಾ ಜಾಗೃತಿ, ಕೊರೊನಾ ಜಾಗೃತಿ ಹಾಗೂ ಎಂಟ್ಹತ್ತು ಹಾಡುಗಳ ವಿಡಿಯೊಗಳನ್ನು ಹೊರತಂದಿದೆ.</p>.<p>ಕೊರೊನಾ ಸವಾಲು: ಕೊರೊನಾ ಕಾಲದಲ್ಲಿ ಕಿರುಚಿತ್ರ ನಿರ್ಮಾಣವು ನಾಗರಾಜ ಅವರಿಗೆ ಸುಲಭದ ಮಾತಾಗಿರಲಿಲ್ಲ. ಚಿತ್ರೀಕರಣ ಸ್ಥಳದಲ್ಲಿ ಸ್ಯಾನಿಟೈಸ್ ಮಾಡುವುದು, ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಜೊತೆಗೆ ಚಿತ್ರೀಕರಣಕ್ಕೆ ಪರವಾನಗಿ ಪಡೆಯುವುದೂ ಸವಾಲೇ ಆಗಿತ್ತು.</p>.<p><strong>ಹುಬ್ಬಳ್ಳಿ–ಧಾರವಾಡ ಮಂದಿ...</strong><br />‘ಸಂತತ’ ತಂಡದ ಸದಸ್ಯರೆಲ್ಲ ಧಾರವಾಡ ಜಿಲ್ಲೆಯವರು. ತಾರಾಗಣದಲ್ಲಿ ಇರುವವರು ಹಾಗೂ ಸಂಗೀತ (ಪ್ರಸನ್ನ ಭೋಜಶೆಟ್ಟರ್), ಛಾಯಾಗ್ರಹಣ (ಆಸೀಫ್ ನದಾಫ್), ಸಂಕಲನ (ಉದಯ್ ಹಬೀಬ್) ಹೀಗೆ ಕಿರುಚಿತ್ರದ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಬಹುತೇಕರು ಹುಬ್ಬಳ್ಳಿ–ಧಾರವಾಡದವರು.</p>.<p>ನಾಯಕ–ನಾಯಕಿ ಪಾತ್ರದಲ್ಲಿರುವ ಯು.ಜೆ. ವಿನಯ್ ಹಾಗೂ ಐಶ್ವರ್ಯಾ ಸಾಲಿಮಠ ಇಬ್ಬರೂ ಮಹಾಸತಿ, ಕನ್ನಡತಿ, ಸೇವಂತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.</p>.<p>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ರಂಗಾಯಣದ ಆವರಣ ಹೀಗೆ ಧಾರವಾಡದಲ್ಲೇ ಸಂಪೂರ್ಣ ಚಿತ್ರೀಕರಣ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>