ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿ 'ದರ್ಬಾರ್' ಯಶಸ್ಸಿಗಾಗಿ ಅಭಿಮಾನಿಗಳಿಂದ ನೆಲದ ಮೇಲೆ ಊಟ, ವಿಶಿಷ್ಟ ಹರಕೆ

Last Updated 8 ಜನವರಿ 2020, 12:38 IST
ಅಕ್ಷರ ಗಾತ್ರ
ADVERTISEMENT
""
""

ಮಧುರೈ: ರಜನಿಕಾಂತ್ ಹೊಸ ಸಿನಿಮಾ 'ದರ್ಬಾರ್' ಯಶಸ್ಸು ಕಾಣಲೆಂದು ರಜನಿ ಅಭಿಮಾನಿಗಳಿಂದ ಈಗಾಗಲೇ ದೇವರಿಗೆ ನಾನಾ ಬಗೆಯ ಹರಕೆ ಹೊತ್ತುಕೊಂಡಿರುವುದಲ್ಲದೆ, ವ್ರತಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.

ತಮಿಳುನಾಡಿನಲ್ಲಿ ರಜನಿಕಾಂತ್ ಅಭಿಮಾನಿಗಳು ಕಳೆದ 15 ದಿನಗಳಿಂದ ಉಪವಾಸ ಇರುವುದಲ್ಲದೆ, ತಟ್ಟೆ ಇಲ್ಲದೆ ನೆಲಕ್ಕೆ ಅನ್ನ ಸಾರು ಹಾಕಿಸಿಕೊಂಡು ಊಟ ಮಾಡುವ ವಿಶಿಷ್ಟ ರೀತಿ ವ್ರತ ಆಚರಿಸಿ ತಮ್ಮ ನೆಚ್ಚಿನ ನಟನ ಸಿನಿಮಾ ಯಶಸ್ಸು ಕಾಣಲೆಂದು ಬೇಡಿಕೊಂಡಿದ್ದಾರೆ.

ಮತ್ತೊಬ್ಬ ಅಭಿಮಾನಿ ದಪ್ಪ ಕಬ್ಬಿಣದ ಸಲಾಕೆಯನ್ನು ಬಾಯಿಗೆ ಚುಚ್ಚಿಸಿಕೊಳ್ಳುವ ಮೂಲಕ ವಿಶಿಷ್ಟ ಹರಕೆ ಹೊತ್ತಿದ್ದಾನೆ. ಮತ್ತೊಬ್ಬ ತ್ರಿಶೂಲವನ್ನೇ ತನ್ನ ಕೆನ್ನೆಯ ಮೂಲಕ ಬಾಯಿಯೊಳಗೆ ಚುಚ್ಚಿಸಿಕೊಂಡು ದೇವರ ಬಳಿ ಬೇಡಿಕೊಂಡಿದ್ದಾನೆ.

ಇದೆಲ್ಲವನ್ನೂನಮ್ಮ ಮೆಚ್ಚಿನ ನಟ ರಜನಿಕಾಂತ್ ಅವರ ಹೊಸ ಸಿನಿಮಾ 'ದರ್ಬಾರ್' ಯಶಸ್ಸು ಕಾಣಬೇಕು ಎಂಬ ಉದ್ದೇಶದಿಂದ ಮಾಡಿದ್ದೇವೆ. ನಮ್ಮ ಹರಕೆ ಸುಳ್ಳಾಗುವುದಿಲ್ಲ. ಖಂಡಿತ ನಮ್ಮ ಹರಕೆ ಫಲ ನೀಡುತ್ತದೆ. ದರ್ಬಾರ್ ಸಿನಿಮಾ ಯಶಸ್ಸು ಕಾಣುತ್ತದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT