‘ಎರಡು ದಂಡೆಯ ಮೇಲೆ’ ಅವರ ನಿರ್ದೇಶನದ ಮೊದಲ ಸಿನಿಮಾ. ‘ಒಲವಿನ ಕಾಣಿಕೆ’, ‘ಸೀತಾ ಆಂಜನೇಯ’, ‘ಶುಭಲಗ್ನ’, ‘ಲಂಚಸಾಮ್ರಾಜ್ಯ’ ಅವರ ನಿರ್ದೇಶನದ ಸಿನಿಮಾಗಳು. ಅವರ ನಿರ್ದೇಶನದ ಕೊನೆಯ ಸಿನಿಮಾ ‘ಇದೊಳ್ಳೆ ಮಹಾಭಾರತ’ ತೆರೆ ಕಾಣಬೇಕಿದೆ.ತಮ್ಮ ನಿರ್ದೇಶನದ ಸಿನಿಮಾಗಳಿಗೆ ಅವರು ಹಾಡುಗಳನ್ನು ಬರೆದಿದ್ದರು.
ನಿರ್ದೇಶನದ ಜೊತೆಗೆ ನಟನೆಯಲ್ಲೂ ಸಕ್ರಿಯರಾಗಿದ್ದ ಕೃಷ್ಣಮೂರ್ತಿ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಪ್ರೊಫೆಸರ್’, ‘ಶ್ರೀಗಂಧ’, ‘ಅರಿಶಿನ ಕುಂಕುಮ’, ‘ಬಲ್ ನನ್ಮಗ’, ‘ಪ್ರಜಾಶಕ್ತಿ’, ‘ನಿರ್ಣಯ’, ‘ಆರ್ಯಭಟ’ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಓದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಬರವಣಿಗೆ ಬಗ್ಗೆ ಅಪಾರ ಹಿಡಿತ ಹೊಂದಿದ್ದರು ಎಂದು ಅವರ ಸಮಕಾಲೀನ ತಂತ್ರಜ್ಞರು ಕೃಷ್ಣಮೂರ್ತಿಯವರನ್ನು ಸ್ಮರಿಸುತ್ತಾರೆ.