ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಆಪ್ತರಾಗಿದ್ದ ವಿಜಯ್ಕುಮಾರ್, ‘ಲಯನ್ ಜಗಪತಿ ರಾವ್’, ‘ಸಿಂಹಾದ್ರಿಯ ಸಿಂಹ’, ‘ಅವತಾರ ಪುರುಷ’, ‘ಜಗದೇಕ ವೀರ’ ಸೇರಿದಂತೆ 15ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಕರ್ನಾಟಕ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ವಿಜಯ್ಕುಮಾರ್ ಸಕ್ರಿಯರಾಗಿದ್ದರು.