<p><strong>ಬೆಂಗಳೂರು:</strong> ‘ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ<br>₹200 ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆ ಖಂಡಿತವಾಗಿಯೂ ಆದೇಶ ರೂಪ ಪಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ವಾರ್ತಾ ಇಲಾಖೆಯಿಂದ ಈ ಅಧಿಸೂಚನೆ ಬಂದಿತ್ತು. ಹೀಗಾಗಿ ಅದಕ್ಕೆ ಕೋರ್ಟ್ನಲ್ಲಿ ತಡೆ ಬಂದಿತ್ತು. ಈ ಬಾರಿ ಗೃಹ ಇಲಾಖೆಯೇ ನಿಯಮದ ಪ್ರಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ನಮ್ಮ ನಿರ್ಮಾಪಕರ ಒಪ್ಪಿಗೆ ಇದೆ. ಕೆಲವರ ಆಕ್ಷೇಪವಿರಬಹುದು. ಕನ್ನಡ ನಿರ್ಮಾಪಕರ ದೊಡ್ಡ ಬಜೆಟ್ನ ಸಿನಿಮಾಗಳು ಬಂದ ಸಂದರ್ಭದಲ್ಲಿ ಟಿಕೆಟ್ ದರ ನಿಗದಿ ಬಗ್ಗೆ ಅವರ ಮನವಿಯ ಪರವಾಗಿ ವಾಣಿಜ್ಯ ಮಂಡಳಿ ನಿಲ್ಲಲಿದೆ. ಈ ಕುರಿತ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದರು. </p>.<p>‘ದೊಡ್ಡ ನಿರ್ಮಾಪಕರು, ಮಲ್ಟಿಪ್ಲೆಕ್ಸ್ನವರು ಸದ್ಯ ಆಕ್ಷೇಪ ಮಾಡಿದರೂ ಮುಂದೆ ಅವರಿಗೂ ಈ ಆದೇಶದ ಪರಿಣಾಮ ತಿಳಿಯಲಿದೆ. ಒಂದು ಸಾವಿರ ಜನರ ಬದಲಾಗಿ ಹತ್ತು ಸಾವಿರ ಜನ ಸಿನಿಮಾ ನೋಡುತ್ತಾರೆ. ‘ಕಾಂತಾರ’ ಪ್ಯಾನ್ ಇಂಡಿಯಾ ಆಗಿ ರಿಲೀಸ್ ಆಗಿರಲಿಲ್ಲ. ಕಮ್ಮಿ ಚಿತ್ರಮಂದಿರಗಳಲ್ಲಿ ಸಾಮಾನ್ಯ ದರದಲ್ಲೇ ಪ್ರದರ್ಶನ ಕಂಡಿತ್ತು. ದಿನಗಳು ಉರುಳಿದಂತೆ ದೊಡ್ಡ ಮಟ್ಟಿನ ಕಲೆಕ್ಷನ್ ಮಾಡಿತ್ತು. ₹200 ರೂಪಾಯಿ ಒಳಗಿನ ದರದಲ್ಲೇ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಲಿಲ್ಲವೇ’ ಎಂದು ಹೇಳಿದರು. </p>.<p>ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕ ಸಾ.ರಾ.ಗೋವಿಂದು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ<br>₹200 ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆ ಖಂಡಿತವಾಗಿಯೂ ಆದೇಶ ರೂಪ ಪಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ವಾರ್ತಾ ಇಲಾಖೆಯಿಂದ ಈ ಅಧಿಸೂಚನೆ ಬಂದಿತ್ತು. ಹೀಗಾಗಿ ಅದಕ್ಕೆ ಕೋರ್ಟ್ನಲ್ಲಿ ತಡೆ ಬಂದಿತ್ತು. ಈ ಬಾರಿ ಗೃಹ ಇಲಾಖೆಯೇ ನಿಯಮದ ಪ್ರಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ನಮ್ಮ ನಿರ್ಮಾಪಕರ ಒಪ್ಪಿಗೆ ಇದೆ. ಕೆಲವರ ಆಕ್ಷೇಪವಿರಬಹುದು. ಕನ್ನಡ ನಿರ್ಮಾಪಕರ ದೊಡ್ಡ ಬಜೆಟ್ನ ಸಿನಿಮಾಗಳು ಬಂದ ಸಂದರ್ಭದಲ್ಲಿ ಟಿಕೆಟ್ ದರ ನಿಗದಿ ಬಗ್ಗೆ ಅವರ ಮನವಿಯ ಪರವಾಗಿ ವಾಣಿಜ್ಯ ಮಂಡಳಿ ನಿಲ್ಲಲಿದೆ. ಈ ಕುರಿತ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದರು. </p>.<p>‘ದೊಡ್ಡ ನಿರ್ಮಾಪಕರು, ಮಲ್ಟಿಪ್ಲೆಕ್ಸ್ನವರು ಸದ್ಯ ಆಕ್ಷೇಪ ಮಾಡಿದರೂ ಮುಂದೆ ಅವರಿಗೂ ಈ ಆದೇಶದ ಪರಿಣಾಮ ತಿಳಿಯಲಿದೆ. ಒಂದು ಸಾವಿರ ಜನರ ಬದಲಾಗಿ ಹತ್ತು ಸಾವಿರ ಜನ ಸಿನಿಮಾ ನೋಡುತ್ತಾರೆ. ‘ಕಾಂತಾರ’ ಪ್ಯಾನ್ ಇಂಡಿಯಾ ಆಗಿ ರಿಲೀಸ್ ಆಗಿರಲಿಲ್ಲ. ಕಮ್ಮಿ ಚಿತ್ರಮಂದಿರಗಳಲ್ಲಿ ಸಾಮಾನ್ಯ ದರದಲ್ಲೇ ಪ್ರದರ್ಶನ ಕಂಡಿತ್ತು. ದಿನಗಳು ಉರುಳಿದಂತೆ ದೊಡ್ಡ ಮಟ್ಟಿನ ಕಲೆಕ್ಷನ್ ಮಾಡಿತ್ತು. ₹200 ರೂಪಾಯಿ ಒಳಗಿನ ದರದಲ್ಲೇ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಲಿಲ್ಲವೇ’ ಎಂದು ಹೇಳಿದರು. </p>.<p>ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕ ಸಾ.ರಾ.ಗೋವಿಂದು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>