ಫಿಲ್ಮ್ಶಾಪ್ನಿರ್ದೇಶಕ ಮತ್ತುನಿರ್ಮಾಪಕ ಬಿ.ಅರ್. ಕೇಶವ್ ಹುಟ್ಟು ಹಾಕಿರುವ ಒಟಿಟಿ ವೇದಿಕೆ. ಸಿನಿಮಾ ಮತ್ತು ಕಿರುತೆರೆಗೆ ಹೊಸದಾಗಿ ಪ್ರವೇಶಿಸುವ ಯುವ ನಿರ್ದೇಶಕರಿಗೆಒಂದು ವೇದಿಕೆ ಕಲ್ಪಿಸುವ ಸಲುವಾಗಿ ಈ ಕಿರುಚಿತ್ರೋತ್ಸವ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕನ್ನಡ ನೆಲ, ಜಲ, ಕನ್ನಡ ಹೋರಾಟಗಾರರು, ಕನ್ನಡ ಸಾಹಿತ್ಯ, ಚಲನಚಿತ್ರ, ಕರ್ನಾಟಕದ ಹಿರಿಮೆ ಸಾರುವ ವಿಷಯದ ಕುರಿತು ಸಿದ್ಧಪಡಿಸಲಾದಕನಿಷ್ಠ 8 ನಿಮಿಷದಿಂದ ಗರಿಷ್ಠ10 ನಿಮಿಷ ಅವಧಿಯಕಿರುಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.