‘ನಿನಗೆ ಕೈಮುಗಿದು ಕೇಳ್ಕೊತ್ತೀನಿ, ಕಾಲಿಗೆ ಬಿದ್ದು ಕೇಳ್ಕೊತ್ತೀನಿ..ಅಭಯಾರಣ್ಯನ ಉಳಿಸು, ಪ್ರಾಣಿಗಳನ್ನು ಉಳಿಸು..ಈ ಗಂಧದಗುಡಿಯನ್ನು ಉಳಿಸು...’
ಇದು ‘ಗಂಧದಗುಡಿ’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ವರನಟ ಡಾ.ರಾಜ್ಕುಮಾರ್ ಅವರ ಡೈಲಾಗ್. ಇದೇ ಕನ್ನಡಿಗರ ನೆಚ್ಚಿನ ನಟ ‘ಅಪ್ಪು’ವಿನ ಮನವಿಯೂ, ಕನಸೂ. ಅಮ್ಮ, ಪಾರ್ವತಮ್ಮ ರಾಜ್ಕುಮಾರ್ ಅವರ ಜನ್ಮದಿನದಂದೇ ದಿವಂಗತ ಪುನೀತ್ ರಾಜ್ಕುಮಾರ್ ಅವರ ಕನಸು ತೆರೆಯ ಮೇಲೆ ಜನ್ಮತಾಳಿದೆ. ಕರ್ನಾಟಕದ ಅದ್ಭುತ ತಾಣಗಳನ್ನು, ವನ್ಯಲೋಕವನ್ನು ಪರಿಚಯಿಸುವ ಹಾಗೂ ಅವುಗಳನ್ನು ಕಾಪಾಡುವ ಸಂದೇಶ ನೀಡುವ ನಿಟ್ಟಿನಲ್ಲಿ ಅಪ್ಪುವಿನ ಪಯಣ ಹೊಸ ‘ಗಂಧದಗುಡಿ’.
ಪಿಆರ್ಕೆ ಪ್ರೊಡಕ್ಷನ್ಸ್ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್. ಅವರ ಜೊತೆಗೂಡಿ ಪುನೀತ್ ಈ ಡಾಕ್ಯೂಫಿಲಂ ತಯಾರಿಸಿದ್ದು, ಇದರ ಶೀರ್ಷಿಕೆ ಟೀಸರ್ನಲ್ಲಿ ಅಪ್ಪು, ಅಪ್ಪಾಜಿ ಇಬ್ಬರೂ ಪುನಃ ಜನ್ಮತಾಳಿದ್ದಾರೆ.ನೈಜ ಘಟನೆಗಳನ್ನು ಆಧರಿಸಿ ಇದರ ಚಿತ್ರೀಕರಣ ನಡೆಸಲಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ, ಕಾಳಿ ನದಿ, ನಾಗರಹೊಳೆ ಪರಿಸರದ ಸುತ್ತಮುತ್ತಲಿನ ಪ್ರದೇಶವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಡಾಕ್ಯೂಫಿಲಂಗೆ ಜೀವತುಂಬಿದೆ. ಕೊನೆಯಲ್ಲಿ ತುಂತುರು ಮಳೆಯಲ್ಲಿ ನೆನಯುತ್ತಾ, ಅದೇ ಮುಗ್ಧ ನಗುವಿನೊಂದಿಗೆ ‘ಗಂಧದಗುಡಿ’ಗೆ ಪುನೀತ್ ಪ್ರೇಕ್ಷಕರನ್ನು ಸ್ವಾಗತಿಸಿದ್ದಾರೆ. 2022ರಲ್ಲಿ ಚಿತ್ರಮಂದಿರಗಳಲ್ಲಿ ಇದು ತೆರೆಕಾಣಲಿದೆ. ಪಿಆರ್ಕೆ ಪ್ರೊಡಕ್ಷನ್ಸ್ ಹೊಣೆ ಹೊತ್ತಿರುವ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನಿ, ‘ಅಪ್ಪು ಅವರ ಕನಸಿದು, ಅದ್ಭುತ ಪಯಣ. ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ, ಮರುಕಳಿಸಿದ ಚರಿತ್ರೆಯಿದು ‘ಗಂಧದ ಗುಡಿ’ ಎಂದಿದ್ದಾರೆ. ನಟ ಶಿವರಾಜ್ ಕುಮಾರ್ ಅವರೂ ಅಪ್ಪುವಿನ ಈ ಪಯಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಅಪ್ಪುವಿನ ಕನಸು, ಇದೊಂದು ಅದ್ಭುತ ಪಯಣ, ನಮ್ಮ ನೆಲ ಹಾಗೂ ಗಂಧದಗುಡಿಯ ಸಂಭ್ರಮಾಚರಣೆ’ ಎಂದಿದ್ದಾರೆ.
Appu’s dream, an incredible journey. It's time for the return - "Gandhada Gudi"
— Ashwini Puneeth Rajkumar (@ashwinipuneet) December 6, 2021
ಅಪ್ಪು ಅವರ ಕನಸಿದು, ಅದ್ಭುತ ಪಯಣ
ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ
ಮರುಕಳಿಸಿದ ಚರಿತ್ರೆಯಿದು – “ಗಂಧದ ಗುಡಿ”https://t.co/uHe5gL8eiX#GandhadaGudi @PuneethRajkumar @amoghavarsha @PRK_Productions
‘ಈ ಪ್ರೊಜೆಕ್ಟ್ ಕುರಿತು ತಾವು ಪ್ರತಿ ಬಾರಿಯೂ ನನ್ನೊಂದಿಗೆ ಮಾತನಾಡುತ್ತಿದ್ದಾಗ ನಿಮ್ಮ ಕಣ್ಣುಗಳಲ್ಲಿನ ಚೈತನ್ಯವನ್ನು, ಆಸಕ್ತಿಯನ್ನು ನಾನು ಗಮನಿಸಿದ್ದೆ. ನಿಮ್ಮ ಹೃದಯಕ್ಕೆ ಇದು ಎಷ್ಟು ಹತ್ತಿರವಾಗಿತ್ತು ಎಂದು ಇದರಿಂದಲೇ ನಾನು ಅರ್ಥೈಸಿಕೊಂಡಿದ್ದೆ. ನಿಮ್ಮ ಕಣ್ಣುಗಳ ಮೂಲಕ ಈ ಗಂಧದಗುಡಿಯನ್ನು ತೋರಿಸಿರುವುದಕ್ಕೆ ಧನ್ಯವಾದ. ಇದೇ ನಿಜವಾಗಿಯೂ ಸ್ವರ್ಗ’ ಎಂದಿದ್ದಾರೆ ನಟ ಯಶ್.
I remember the twinkle in your eyes every time u spoke about this project. The passion, the enthusiasm u had towards this film showed how close it was to your heart. Thank you Appu sir for showing our Gandhadagudi through your eyes. It's truly a paradise.https://t.co/r1580plnot pic.twitter.com/6FnR3L4E7G
— Yash (@TheNameIsYash) December 6, 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.