ಆದರೆ, ಕಾರಿನೊಳಗೆ ಇರಿಸಲು ರಾಘವೇಂದ್ರ ರಾಯರ ಪಾದುಕೆ ತರಿಸಿದರಂತೆ. ಅದ್ಯಾಕೋ ತೃಪ್ತಿ ಎನಿಸಲಿಲ್ಲ. ಆದರೆ, ಕಾರಿನೊಳಗೆ ರಾಯರು ಇರಬೇಕು ಎಂಬುದು ಜಗ್ಗೇಶ್ ಸಂಕಲ್ಪ. ಕಾರು ಡೆಲಿವರಿ ಸಂದರ್ಭವಾದರೂ ರಾಯರ ಕೃಪೆಯಾಗಲಿ ಎಂದು ಸಂಕಲ್ಪಿಸಿದರಂತೆ ಅವರು. ಆ ದಿನ ಅವರ ಗೆಳೆಯ ಡಾ.ಸುನಿಲ್ ಅವರು ಮನೆಗೆ ಬಂದು ಬೆಳ್ಳಿಯಿಂದ ಕೈ ಕೆತ್ತನೆ ಮಾಡಲಾದ ರಾಘವೇಂದ್ರ ರಾಯರ ಪ್ರತಿಮೆಯನ್ನು ಜಗ್ಗೇಶ್ ಅವರಿಗೆ ಕೊಟ್ಟರಂತೆ. ಈಗ ಜಗ್ಗೇಶ್ ಫುಲ್ ಖುಷ್.