‘ಹಂಗಾಮ 2’ ನಿರ್ದೇಶನಕ್ಕೆ ಮುಂದಾದ ಅವರಿಗೆ ಆರಂಭದಲ್ಲೇ ಸ್ಟಾರ್ ನಟರಿಂದ ಭಾರಿ ನಿರಾಸೆಯ ಅನುಭವವಾಗಿದೆ. ‘ನಾನು ಐದು ವರ್ಷ ಚಿತ್ರೋದ್ಯಮದಿಂದ ದೂರ ಉಳಿದಿದ್ದೆ. ಇದಕ್ಕಾಗಿಯೇ ಸ್ಟಾರ್ ನಟರು ನನ್ನನ್ನು ಔಟ್ಡೇಟೆಡ್ ಎಂದು ಭಾವಿಸಿರಬಹುದು. ‘ಹಂಗಾಮ 2’ರ ಪರಿಕಲ್ಪನೆ ಬಗ್ಗೆ ಆಯುಷ್ಮಾನ್, ಕಾರ್ತಿಕ್ ಮತ್ತು ಸಿದ್ಧಾರ್ಥ್ ಸೇರಿದಂತೆ ಬಹಳಷ್ಟು ನಟರಿಗೆ ವಿವರಿಸಿದ್ದೆ. ಅವರೆಲ್ಲರೂ ನಟಿಸಲು ನಿರಾಕರಿಸಿದರು. ಈಗ ಮೀಜಾನ್ ಜೆಫ್ರಿ, ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಪ್ರಣೀತಾ ಸುಭಾಷ್ ಜೊತೆಗೆ ಖುಷಿಯಿಂದ ಚಿತ್ರ ಮಾಡುತ್ತಿದ್ದೇನೆ’ ಎಂಬುದು ಅವರ ವಿವರಣೆ.