<p>ಚಿತ್ರದಲ್ಲಿ ಹೀರೋ ಸಹಜವಾಗಿರಬೇಕು. ಅಂಥ ಪಾತ್ರ ನನಗಿಷ್ಟ. ಇಲ್ಲಿನ ಪಾತ್ರ ನನ್ನ ವ್ಯಕ್ತಿತ್ವಕ್ಕೂ, ವೃತ್ತಿಗೂ ತುಂಬಾ ಹತ್ತಿರದಲ್ಲಿದೆ. ಹಾಗಾಗಿ ಈ ಪಾತ್ರಕ್ಕೆ ಒಪ್ಪಿಕೊಂಡೆ.</p>.<p>ಹೀಗೆಂದು ತುಂಬಾ ಸರಳ ಮತ್ತು ವಿನಯದಿಂದ ಒಪ್ಪಿಕೊಂಡರು ಯೋಗೀಶ್ ಶೆಟ್ಟಿ.</p>.<p>‘ಹರೀಶ ವಯಸ್ಸು 36’ ಚಿತ್ರದ ನಾಯಕ ಯೋಗೀಶ್. ಈ ಕಥೆ ಕೇಳುವವರೆಗೆ ಯೋಗೀಶ್ ಅವರಿಗೆ ಮದುವೆ ಆಗಿರಲಿಲ್ಲವಂತೆ. ಚಿತ್ರದ ಮಾತುಕತೆಗಳು ನಡೆಯುತ್ತಿದ್ದಂತೆಯೇ ಹುಡುಗಿ ನಿಶ್ಚಯವಾಗಿ ಮದುವೆಯೂ ಆಯಿತಂತೆ.</p>.<p>ಯೋಗೀಶ್ ಅವರು ಕಾಸರಗೋಡಿನ ಮಂಜೇಶ್ವರದವರು. ಮನಃಶಾಸ್ತ್ರಜ್ಞ,ಸಮಾಜ ಸೇವಕ. ಸರ್ಕಾರಿ ಇಲಾಖೆಯೊಂದರಲ್ಲಿ ಆಪ್ತ ಸಮಾಲೋಚಕರು. ಯಕ್ಷಗಾನಪಟು. ಅಚ್ಚಗನ್ನಡದ ಸ್ವಚ್ಛ ಮಾತು ಅವರದ್ದು. ಮಂಗಳೂರಿನ ಸಂಕೇತ ತಂಡದಲ್ಲಿ ಕಲಾವಿದನೂ ಹೌದು.</p>.<p class="Briefhead"><strong>ಚಿತ್ರದಲ್ಲಿ ತೋರಿಸಿದ್ದು 36ರ ತುಮುಲಗಳು</strong></p>.<p>‘36 ಕಳೆದರೂ ಉದ್ಯೋಗ ಸಿಗದಿರುವುದು, ಉದ್ಯೋಗ ಸಿಗದ ಕಾರಣಕ್ಕೆ ಮದುವೆ ಆಗದಿರುವುದು, ಅಂಥವರು ಸಮಾಜದಲ್ಲಿ ಗೇಲಿಗೊಳಗಾಗುವುದು... ಹೀಗೆ ಒಂದಕ್ಕೊಂದು ಕೊಂಡಿಯಂತಿರುವ ಸಮಸ್ಯೆಗಳನ್ನು ನೋಡುತ್ತಲೇ ಇದ್ದೇನೆ. ಅನೇಕರು ಬೇರೆ ಬೇರೆ ಕಾರಣಗಳಿಂದ ಒಂಟಿಯಾಗಿ ಉಳಿದ ಪ್ರಕರಣಗಳನ್ನೂ ಹೇಳಿಕೊಂಡದ್ದಿದೆ. ಹಾಗಾಗಿ ಆ ಅನುಭವ ಕಥನಗಳು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಕಾರಣವಾದವು’ ಎಂದರು ಯೋಗೀಶ್.</p>.<p>ಹೆಚ್ಚು ಸಿನಿಮಾಗಳನ್ನು ವೀಕ್ಷಿಸುತ್ತಾರಂತೆ ಯೋಗೀಶ್. ‘ಹಾಸ್ಯವೂ ಇದೆ. ಭಿನ್ನವಾದ ತಿರುಳೂ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂದರು ಅವರು.</p>.<p>ನಿರ್ದೇಶಕ ಗುರುರಾಜ್ ಜೇಷ್ಠ, ಯೋಗೀಶ್ ಅವರಲ್ಲಿ ಹರೀಶನ ಪಾತ್ರ ಸೃಷ್ಟಿ ಮಾಡಿದ್ದಾರೆ. ಅವರೂ ಸಂಕೇತ ತಂಡದಲ್ಲಿದ್ದವರು. ಸ್ಟುಡಿಯೋ, ನಿರ್ಮಾಣ ಚಟುವಟಿಕೆಗಳಲ್ಲಿ ಅನುಭವಿಯೂ ಹೌದು.</p>.<p>ಶ್ವೇತಾ ಅರೆಹೊಳೆ ಈ ಚಿತ್ರದ ನಾಯಕಿ. ಸದ್ಯ ಕನ್ನಡ ಎಂ.ಎ. ಓದುತ್ತಿದ್ದಾರೆ. ರಂಗಭೂಮಿಯ ಹಿನ್ನೆಲೆ ಉಳ್ಳವರು. ‘ನಂದಗೋಕುಲ ಡ್ಯಾನ್ಸ್ ಆ್ಯಂಡ್ ಥಿಯೇಟರ್’ ತಂಡವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ‘ಇದೊಂದು ಅನಿರೀಕ್ಷಿತ ಅವಕಾಶ ಮತ್ತು ಅನುಭವ’ ಎಂದರು ಶ್ವೇತಾ.</p>.<p>‘ಹರಿಶಣ್ಣಂಗೆ ವಯಸ್ಸು 36.. ಮದುವೆಯಾಗಿಲ್ಲ ಅಂತ ಬೇಜಾರು’ ಎಂಬ ಶೀರ್ಷಿಕೆ ಹಾಡನ್ನು ಪುನೀತ್ ರಾಜ್ಕುಮಾರ್ ಹಾಡಿದ್ದಾರೆ. ಟ್ರೇಲರ್ ಕೂಡಾ ಮೆಚ್ಚುಗೆ ಗಳಿಸಿದೆ.ಹಿರಿಯ ನಟ ಉಮೇಶ್, ಮಂಜುಳಾ ಜನಾರ್ದನ್ ರೋಹಿಣಿ ಜಗರಾಮ್, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ.</p>.<p>ಶಿರಡಿ ಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್ ಅಡಿ ಲಕ್ಷ್ಮಿಕಾಂತ್ ಎಚ್.ವಿ.ರಾವ್, ತ್ರಿಲೋಕ್ ಝಾ, ಚಿಂತಕುಂಟ ಶ್ರೀದೇವಿ, ಆರ್ ದೀಪಾ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.</p>.<p>ಚಿತ್ರ ಮಾರ್ಚ್ 4ರಂದು ತೆರೆ ಕಾಣಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದಲ್ಲಿ ಹೀರೋ ಸಹಜವಾಗಿರಬೇಕು. ಅಂಥ ಪಾತ್ರ ನನಗಿಷ್ಟ. ಇಲ್ಲಿನ ಪಾತ್ರ ನನ್ನ ವ್ಯಕ್ತಿತ್ವಕ್ಕೂ, ವೃತ್ತಿಗೂ ತುಂಬಾ ಹತ್ತಿರದಲ್ಲಿದೆ. ಹಾಗಾಗಿ ಈ ಪಾತ್ರಕ್ಕೆ ಒಪ್ಪಿಕೊಂಡೆ.</p>.<p>ಹೀಗೆಂದು ತುಂಬಾ ಸರಳ ಮತ್ತು ವಿನಯದಿಂದ ಒಪ್ಪಿಕೊಂಡರು ಯೋಗೀಶ್ ಶೆಟ್ಟಿ.</p>.<p>‘ಹರೀಶ ವಯಸ್ಸು 36’ ಚಿತ್ರದ ನಾಯಕ ಯೋಗೀಶ್. ಈ ಕಥೆ ಕೇಳುವವರೆಗೆ ಯೋಗೀಶ್ ಅವರಿಗೆ ಮದುವೆ ಆಗಿರಲಿಲ್ಲವಂತೆ. ಚಿತ್ರದ ಮಾತುಕತೆಗಳು ನಡೆಯುತ್ತಿದ್ದಂತೆಯೇ ಹುಡುಗಿ ನಿಶ್ಚಯವಾಗಿ ಮದುವೆಯೂ ಆಯಿತಂತೆ.</p>.<p>ಯೋಗೀಶ್ ಅವರು ಕಾಸರಗೋಡಿನ ಮಂಜೇಶ್ವರದವರು. ಮನಃಶಾಸ್ತ್ರಜ್ಞ,ಸಮಾಜ ಸೇವಕ. ಸರ್ಕಾರಿ ಇಲಾಖೆಯೊಂದರಲ್ಲಿ ಆಪ್ತ ಸಮಾಲೋಚಕರು. ಯಕ್ಷಗಾನಪಟು. ಅಚ್ಚಗನ್ನಡದ ಸ್ವಚ್ಛ ಮಾತು ಅವರದ್ದು. ಮಂಗಳೂರಿನ ಸಂಕೇತ ತಂಡದಲ್ಲಿ ಕಲಾವಿದನೂ ಹೌದು.</p>.<p class="Briefhead"><strong>ಚಿತ್ರದಲ್ಲಿ ತೋರಿಸಿದ್ದು 36ರ ತುಮುಲಗಳು</strong></p>.<p>‘36 ಕಳೆದರೂ ಉದ್ಯೋಗ ಸಿಗದಿರುವುದು, ಉದ್ಯೋಗ ಸಿಗದ ಕಾರಣಕ್ಕೆ ಮದುವೆ ಆಗದಿರುವುದು, ಅಂಥವರು ಸಮಾಜದಲ್ಲಿ ಗೇಲಿಗೊಳಗಾಗುವುದು... ಹೀಗೆ ಒಂದಕ್ಕೊಂದು ಕೊಂಡಿಯಂತಿರುವ ಸಮಸ್ಯೆಗಳನ್ನು ನೋಡುತ್ತಲೇ ಇದ್ದೇನೆ. ಅನೇಕರು ಬೇರೆ ಬೇರೆ ಕಾರಣಗಳಿಂದ ಒಂಟಿಯಾಗಿ ಉಳಿದ ಪ್ರಕರಣಗಳನ್ನೂ ಹೇಳಿಕೊಂಡದ್ದಿದೆ. ಹಾಗಾಗಿ ಆ ಅನುಭವ ಕಥನಗಳು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಕಾರಣವಾದವು’ ಎಂದರು ಯೋಗೀಶ್.</p>.<p>ಹೆಚ್ಚು ಸಿನಿಮಾಗಳನ್ನು ವೀಕ್ಷಿಸುತ್ತಾರಂತೆ ಯೋಗೀಶ್. ‘ಹಾಸ್ಯವೂ ಇದೆ. ಭಿನ್ನವಾದ ತಿರುಳೂ ಇದೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂದರು ಅವರು.</p>.<p>ನಿರ್ದೇಶಕ ಗುರುರಾಜ್ ಜೇಷ್ಠ, ಯೋಗೀಶ್ ಅವರಲ್ಲಿ ಹರೀಶನ ಪಾತ್ರ ಸೃಷ್ಟಿ ಮಾಡಿದ್ದಾರೆ. ಅವರೂ ಸಂಕೇತ ತಂಡದಲ್ಲಿದ್ದವರು. ಸ್ಟುಡಿಯೋ, ನಿರ್ಮಾಣ ಚಟುವಟಿಕೆಗಳಲ್ಲಿ ಅನುಭವಿಯೂ ಹೌದು.</p>.<p>ಶ್ವೇತಾ ಅರೆಹೊಳೆ ಈ ಚಿತ್ರದ ನಾಯಕಿ. ಸದ್ಯ ಕನ್ನಡ ಎಂ.ಎ. ಓದುತ್ತಿದ್ದಾರೆ. ರಂಗಭೂಮಿಯ ಹಿನ್ನೆಲೆ ಉಳ್ಳವರು. ‘ನಂದಗೋಕುಲ ಡ್ಯಾನ್ಸ್ ಆ್ಯಂಡ್ ಥಿಯೇಟರ್’ ತಂಡವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ‘ಇದೊಂದು ಅನಿರೀಕ್ಷಿತ ಅವಕಾಶ ಮತ್ತು ಅನುಭವ’ ಎಂದರು ಶ್ವೇತಾ.</p>.<p>‘ಹರಿಶಣ್ಣಂಗೆ ವಯಸ್ಸು 36.. ಮದುವೆಯಾಗಿಲ್ಲ ಅಂತ ಬೇಜಾರು’ ಎಂಬ ಶೀರ್ಷಿಕೆ ಹಾಡನ್ನು ಪುನೀತ್ ರಾಜ್ಕುಮಾರ್ ಹಾಡಿದ್ದಾರೆ. ಟ್ರೇಲರ್ ಕೂಡಾ ಮೆಚ್ಚುಗೆ ಗಳಿಸಿದೆ.ಹಿರಿಯ ನಟ ಉಮೇಶ್, ಮಂಜುಳಾ ಜನಾರ್ದನ್ ರೋಹಿಣಿ ಜಗರಾಮ್, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ.</p>.<p>ಶಿರಡಿ ಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್ ಅಡಿ ಲಕ್ಷ್ಮಿಕಾಂತ್ ಎಚ್.ವಿ.ರಾವ್, ತ್ರಿಲೋಕ್ ಝಾ, ಚಿಂತಕುಂಟ ಶ್ರೀದೇವಿ, ಆರ್ ದೀಪಾ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.</p>.<p>ಚಿತ್ರ ಮಾರ್ಚ್ 4ರಂದು ತೆರೆ ಕಾಣಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>